Belagavi

ಬೆಳಗಾವಿಯ ಅನಗೋಳದಲ್ಲಿ ಅತ್ಯಾಧುನಿಕ ‘ಶ್ರೀ ತಿರುಮಲ ಕೆಫೆ’ ಉದ್ಘಾಟನೆ

Share

ಬೆಳಗಾವಿಯ ಅನಗೋಳದ ಬಿಗ್ ಬಝಾರ್ ಹತ್ತಿರ ಮೋಹನ ರೆಡ್ಡಿ ಹಾಗೂ ಸುಜಯ ಜಾಧವ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ ಹಾಗೂ ಅತ್ಯಾಧುನಿಕ ‘ಶ್ರೀ ತಿರುಮಲ ಕೆಫೆ’ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಫೆಗೆ ಶುಭ ಕೋರಿದರು.

ಬೆಳಗಾವಿಯ ಅನಗೋಳ ಪ್ರದೇಶದ ಬಿಗ್ ಬಝಾರ್ ಬಳಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ‘ಶ್ರೀ ತಿರುಮಲ ಕೆಫೆ’ಯನ್ನು ಆರಂಭಿಸಲಾಗಿದೆ. ಮೋಹನ ರೆಡ್ಡಿ ಹಾಗೂ ಸುಜಯ ಜಾಧವ್ ಅವರ ನೇತೃತ್ವದಲ್ಲಿ ಮೂಡಿಬಂದಿರುವ ಈ ನೂತನ ಕೆಫೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ್ ನಾವಲಗಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.

Tags:

error: Content is protected !!