BELAGAVI

ಶತಮಾನದ ದಾರಿದೀಪ ‘ಶರಣರ ಶಿವಯೋಗ’: ಬೆಳಗಾವಿಯಲ್ಲಿ ಡಾ. ದಯಾನಂದ ನೂಲಿ ಅವರ ಕೃತಿ ಲೋಕಾರ್ಪಣೆ

Share

ಶರಣರ ಅರಿವು ಮತ್ತು ಆಚಾರದ ಬದುಕು ಕೇವಲ ಇತಿಹಾಸವಲ್ಲ, ಅದು ಇಂದಿನ ಆಧುನಿಕ ಯುಗಕ್ಕೆ ದಾರಿದೀಪ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೆಳಗಾವಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಖ್ಯಾತ ವೈದ್ಯ ಸಾಹಿತಿ ಡಾ. ದಯಾನಂದ ನೂಲಿ ಅವರ ‘ಶರಣರ ಶಿವಯೋಗ’ ಗ್ರಂಥ ಲೋಕಾರ್ಪಣೆಗೊಂಡಿದ್ದು, ಭಕ್ತಿ ಮತ್ತು ವಿಜ್ಞಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.

ಬೆಳಗಾವಿಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಗನೂರು ರುದ್ರಾಕ್ಷಿ ಮಠ ಹಾಗೂ ಸ್ವಾನುಭವ ನೆಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ‘ಶರಣರ ಶಿವಯೋಗ’ ಗ್ರಂಥವನ್ನು ಬಿಡುಗಡೆ ಮಾಡಿದರು. “ಶಿವಯೋಗವು ಕೇವಲ ಪೂಜೆಯಲ್ಲ, ಅದು ಕಾಯಕ-ದಾಸೋಹದ ಮೂಲಕ ಅಂತರಂಗ-ಬಹಿರಂಗವನ್ನು ಶುದ್ಧೀಕರಿಸುವ ಅಖಂಡ ಮಾರ್ಗ” ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಡಾ. ಅವಿನಾಶ ಕವಿ ಅವರು ಗ್ರಂಥ ಪರಿಚಯಿಸುತ್ತಾ, ಇದು ವೈಜ್ಞಾನಿಕ ತಳಹದಿಯ ಮೇಲೆ ರೂಪಗೊಂಡ ಲಿಂಗಾಯತ ಧರ್ಮದ ಸಂಪೂರ್ಣ ಪರಿಚಯ ಎಂದರು. ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಿವಾನುಭವ ಗೋಷ್ಠಿಗಳು, ವಚನ ಸಂಗೀತ ಹಾಗೂ ಗಣ್ಯರ ಚಿಂತನೆಗಳು ಜರುಗಿದವು.

Tags:

error: Content is protected !!