ಧಾರವಾಡದ ಪತ್ರೇಶ್ವರ ದೇವಸ್ಥಾನದ ಬಳಿ ಸತ್ತು ಬಿದ್ದ ನಾಲ್ಕು ಹಸುಗಳು ಗಮನಿಸಿದ ಮುಸ್ಲಿಂ ಯುವಕನೊಬ್ಬ ಅವುಗಳನ್ನು ಗುಂಡಿ ತೋಡಿ ಅಂತ್ಯಕ್ರಿಯೆ ನೇರವೇರಿಸಯವ ಮೂಲ ಮೂಖ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ನೀಡಿ ಮಾದರಿಯಾಗಿದ್ದಾರೆ.
ಧಾರವಾಡದ ಪತ್ರೇಶ್ವರ ದೇವಸ್ಥಾನದ ಬಳಿ ಸತ್ತು ಬಿದ್ದ ನಾಲ್ಕು ಹಸುಗಳಿಗೆ ಮುಸ್ಲಿಂ ಯುವಕ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಯಾರೋ ಅನಾಮಿಕರು ಸತ್ತ ನಾಲ್ಕು ಹಸುಗಳನ್ನು ತಂದು ಧಾರವಾಡದಲ್ಲಿ ಪತ್ರೇಶ್ವರ ಎಂದೇ ಪ್ರಸಿದ್ಧವಾದ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ಕಸದ ರಾಶಿಯಲ್ಲಿ ಬಿಸಾಕಿ ಹೋಗಿದ್ದಾರೆ. ರಸ್ತೆಯಲ್ಲಿ ಹೋಗುತಿದ್ದ ಮುಸ್ಲಿಂ ಯುವಕ ಜುಬೇರ್ ಬಸ್ತಿ ಅವರು ಗಮನಿಸಿ ಸತ್ತ ನಾಲ್ಕು ಹಸುಗಳನ್ನು ತನ್ನ ತನ್ನ ಸ್ನೇಹಿತರ ಜೊತೆಗೂಡಿ ಜೆಸಿಬಿಯಿಂದ ಗುಂಡಿಗಳನ್ನು ತಗಿಸಿ ಸತ್ತ ನಾಲ್ಕು ಹಸುಗಳನ್ನು ಮಣ್ಣು ಮಾಡುವ ಮೂಲಕ ಮಾನವೀಯತೆ ಜೊತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಸ್ಲಿಮರಲ್ಲು ಗೋ ರಕ್ಷಕರು, ಗೋವುಗಳನ್ನು ಗೌರಿಸುವರು ಇದ್ದಾರೆ ಎಂದು ತಿಳಿಯಬಹುದು ಈ ಮುಸ್ಲಿಂ ಯುವಕ ಅನೇಕ ಮುಸ್ಲಿಂ ಯುಕರಿಗೆ ಮಾದರಿಯಾಗಿದ್ದಾರೆ. ಇಂತಹ ಇನ್ನೂ ಅನೇಕ ಮುಸ್ಲಿಂ ಯುವಕರು ಸಮಾಜದಲ್ಲಿ ಇಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಆಗ ಸಮಾಜದಲ್ಲಿ ಪ್ರತಿಯೊಂದು ಧರ್ಮಕ್ಕೂ ಗೌರವ ಅನ್ನುವುದು ನೋಡಲು ಸಾಧ್ಯ..
