ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರದ ರಾಜ್ಯದ ಉಪ ಮುಖ್ಯಮಂತ್ರಿ ಅಜೀತ ಪವಾರ ನಿಧನಕ್ಕೆ ಕೆಎಲ್ಇ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಂತಾಪ ಸೂಚಿಸಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಅಜೀತ ಪವಾರಯವರು ಅವರ ದೊಡ್ಡಪ್ಪ ಶರದ ಪವಾರಗಿಂತ ಅತೀ ವೇಗದಲ್ಲಿ ಬೆಳೆದವರು.ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದರು.ಬಡವರ ಕೆಲಸಗಳನ್ನು ಮಾಡಿಕೊಡುತ್ತಿದ್ದರು.ಅಜೀತ ಪವಾರ ಮುಖ್ಯಮಂತ್ರಿ ಆಗಬೇಕಾಗಿತ್ತು.ದುರದೈವಿ ಅವರು ಮುಖ್ಯಮಂತ್ರಿ ಆಗುವುದಕ್ಕೆ ಆಗಲಿಲ್ಲ.ನಂದು ಅವರ ಕುಟುಂಬದ್ದು ಒಳ್ಳೆಯ ಸಂಬಂದವಿದೆ.ಕಳೆದ ತಿಂಗಳು ಅವರು ಮಹಾರಾಷ್ಟ್ರದ ಮಿರಜ ಪಟ್ಟಣದಲ್ಲಿ ಅಜೀತ ಪವಾರಯವರನ್ನು ಭೇಟಿಯಾಗಿದ್ದೆ.ಅವರನ್ನು ಕಳೆದುಕೊಂಡು ದೇಶ ಬಡವಾಗಿದೆ ಎಂದು ಡಾ!ಪ್ರಭಾಕರ ಕೋರೆ ಸಂತಾಪವನ್ನು ಸೂಚಿಸಿದ್ದಾರೆ.
-ಡಾ!ಪ್ರಭಾಕರ ಕೋರೆ,ಕೆಎಲ್ಇ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ
