BELAGAVI

ಬೆಳಗಾವಿಯಲ್ಲಿ ರೋಟರಿ ಹಾಫ್ ಮ್ಯಾರಾಥಾನ್

Share

ಬೆಳಗಾವಿಯ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ವತಿಯಿಂದ ಪ್ರತಿ ವರ್ಷದಂತೆ ಈ‌ ಬಾರಿಯೂ 15ನೇ ಆವೃತ್ತಿಯ ಹಾಫ್ ಮ್ಯಾರಾಥಾನ್ ನಲ್ಲಿ ಸಾವಿರಾರು ಜನರು ಭಾಗಿಯಾಗಿ ಓಟ ನಡೆಸಿ ವಿಜೇತರಾದರು.

ಭಾನುವಾರ ಕೆಎಲ್ಇ ತ್ಯಾಗವೀರ ಸಿರಸಂಗಿ ಲಿಂಗರಾಜ್ ಕಾಲೇಜಿನ ಆವರಣದಿಂದ ಆರಂಭವಾದ ಮ್ಯಾರಥಾನ್ ನಗರ್ ಕಾಲೇಜು ರಸ್ತೆ, ಕ್ಯಾಂಪ್, ಸಾವಗಾವ ರೋಡ್ ಪ್ರದೇಶ ಸೇರಿದಂತೆ ನಗರದ ವಿವಿಧ ಪ್ರದೇಶದಲ್ಲಿ ಓಟ ನಡೆಸಿದರು.
ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದ ಉಮಾ ಮಾತನಾಡಿ, ಯುವಕರು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಮ್ಯಾರಾಥಾನ್ ಭಾಗಿಯಾಗಬೇಕು. ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ ಆರೋಗ್ಯವನ್ನು ಹಣ ಕೊಟ್ಟು ಪಡೆದುಕೊಳ್ಳುವಂತಾಗಿದೆ. ಅದರ ಬದಲು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದ ಕರೆ ನೀಡಿದರು.
ಅತ್ಯಂತ ಶಿಸ್ತುಬದ್ಧವಾಗಿ ಮ್ಯಾರಾಥಾನ್ ನಡೆಸಲಾಯಿತು. ಇದರಲ್ಲಿ ಭಾಗಿಯಾಗಿ ಒಳ್ಳೆಯ ಅನುಭವ ದೊರೆಯಿತು. ಆಯೋಜಕರು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರು. ಯುವಕರು ಆರೋಗ್ಯ ಸದೃಢತೆಗಾಗಿ ಮ್ಯಾರಾಥಾನ್’ನಲ್ಲಿ ಭಾಗಿಯಾಗಬೇಕು. ನಿರ್ವ್ಯಸನಿಗಳಾಗಿ ಯುವಕರು ದೃಢ ಸಂಕಲ್ಪವನ್ನು ಮಾಡಿ ನಿರ್ಧಾರಿತ ಗುರಿಯನ್ನು ಮುಟ್ಟಲು ಮ್ಯಾರಾಥಾನ್’ಗಳು ಸಹಾಯಕವಾಗಿದ್ದು, ನಗರವಷ್ಟೇ ಅಲ್ಲದೇ, ಹಳ್ಳಿಗಳಲ್ಲಿಯೂ ಮ್ಯಾರಾಥಾನ್ ಆಯೋಜಿಸಬೇಕೆಂದು ಹುಕ್ಕೇರಿ ತಾಲೂಕಿನ ಅಳದಾಳದಿಂದ ಭಾಗಿಯಾದ ಭೈರು ನಾಯಿಕ ಹೇಳಿದರು.

ಕಾರಾಗೃಹ ಇಲಾಖೆಯ ಸಿಬ್ಬಂದಿ ಉಮಾ ಅವರು ಮೊದಲ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಮ್ಯಾರಾಥಾನ್’ನಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು. ಸೋಲು ಗೆಲುವಿಗಿಂತಲೂ ಸ್ಪರ್ಧೆಯಲ್ಲಿ ಭಾಗಿಯಾಗುವುದು ಮುಖ್ಯವಾಗಿದೆ. ಊಟ ಪಾಠದೊಂದಿಗೆ ಯುವಕರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಈಗಿನ ಕಾಲದಲ್ಲಿ ಆರೋಗ್ಯವನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು, ಎಲ್ಲರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಸದೃಢರಾಗಿರಬೇಕೆಂದು ಕರೆ ನೀಡಿದರು.

ಸಾಯಿಶ್ರೀ ಪಾಟೀಲ್ ಮಾತನಾಡಿಕಳೆದ 2018ರಿಂದ ರೋಟರಿ ಕ್ಲಬ್ ಆಫ್ ವೇಣುಗ್ರಾಮ್ ಬೆಳಗಾವ್ ಆಯೋಜಿಸುವ ಮ್ಯಾರಾಥಾನ್ ನಲ್ಲಿ ಭಾಗವಹಿಸುತ್ತಾ ಬಂದಿದ್ದೇ‌ನೆ. ಇದು ನನ್ನ 36 ಮ್ಯಾರಾಥಾನ್ ಬೆಳಗಾವಿಯಲ್ಲಿ ಓಟ ನಡೆಸುವುದು ಸಂತೋಷ ತಂದಿದೆ. ನಾನು ಭಾಗವಿಸಿದ ಮ್ಯಾರಾಥಾನ್ ನಲ್ಲಿ 10 ಪದಕಗಳನ್ನು ಪಡೆದಿದ್ದೇನೆ. ಇಂಥ ಮ್ಯಾರಾಥಾನ್ ಗಳು ಬೆಳಗಾವಿಯಲ್ಲಿ ಹೆಚ್ಚು ಆಗಬೇಕು ಎಂದರು.

ಈ ಮ್ಯಾರಥಾನ್ ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಓಟಗಾರರು ಭಾಗಿಯಾಗಿ 21 ಕಿ.ಮೀ, 10 ಕಿ.ಮೀ, 5ಕಿ.ಮೀ ಹಾಗೂ 3 ಕಿ.ಮೀ ಫನ್ ರನ್ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದರು. ಮ್ಯಾರಾಥಾನ್ ವಿಜೇತರಿಗೆ ಸುವರ್ಣ ನಾಣ್ಯ ಬಹುಮಾನ ನೀಡಲಾಯಿತು.
ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ಅಧ್ಯಕ್ಷ ಶಶಿಕಾಂತ ನಾಯಕ, ಲೋಕೇಶ್ ಹೊಂಗಲ, ವೈಶಾಲಿ ಸಾಗರೆ, ಸಚಿನ ಕುಲಗೋಡ ಸೇರಿದಂತೆ ಆಯೋಜನೆ ಮಾಡಿದ್ದರು.
ಈ ಸಂದರ್ಭದಲ್ಲಿ ಸಿಪಿಐ ವಿಜಯ ಶಿನ್ನೂರ ಮಾರ್ಕೇಟ್ ಪಿಎಸ್ಐ ವಿಠ್ಠಲ, ಕೀರ್ತಿ ಟೋಪಣ್ಣವರ ಸೇರಿದಂತೆ ಇನ್ನಿತರರು ಓಟದಲ್ಲಿ ಭಾಗಿಯಾಗಿದ್ದರು.

Tags:

error: Content is protected !!