Accident

ಗ್ರಾಮ ಪಂಚಾಯತಿ ಸದಸ್ಯನ ಶವ ಪತ್ತೆ:ಸಾವಿನ ಸುತ್ತ ಅನುಮಾನದ ಹುತ್ತ

Share

ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ಯುವಕನ ಶವ ಅಪಘಾತವಾದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ನಡೆದಿದೆ. ತಾರಾಪೂರ ಗ್ರಾಮ ಪಂಚಾಯತಿ ಸದಸ್ಯನಾಗಿರೊ
ಸಂತೋಷ ಬಿರಾದಾರ (36) ಶವವಾಗಿ ಪತ್ತೆಯಾಗಿರೋ ಯುವಕನಾಗಿದ್ದಾನೆ. ಬೈಕ್ ಮೇಲಿಂದ ಬಿದ್ದ ಸ್ಥಿತಿಯಲ್ಲಿರೋ ಶವ ಪತ್ತೆಯಾಗಿದೆ. ತಲೆಗೆ ಏಟು ಬಿದ್ದು ರಕ್ತಸ್ರಾವವಾಗಿರೋ ಗುರುತು ಪತ್ತೆಯಾಗಿದ್ದು ಸ್ಥಳಕ್ಕೆ ಆಲಮೇಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರ ತನಿಖೆ ಬಳಿಕ ಇದು ಅಪಘಾತವೋ ಕೊಲೆಯೋ ಎಂಬ ಮಾಹಿತಿ ತಿಳಿದು ಬರಲಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Tags:

error: Content is protected !!