Vijaypura

ಜು.13 ರಂದು ಹಿರಿಯ ಪತ್ರಕರ್ತ, ಸಂಘರ್ಷದ ಕಿಡಿ ಅನಿಲ ಹೊಸಮನಿಯವರಿಗೆ ಅಭಿನಂದನಾ ಸಮಾರಂಭ: ವಿವಿಧ ಗೋಷ್ಠಿಗಳ ಆಯೋಜನೆ

Share

ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ದಲಿತ ದಮನಿತರ ಧ್ವನಿ, ಸಾಹಿತಿ ಅನಿಲ ಹೊಸಮನಿ ಇವರಿಗೆ ಅಭಿನಂದನಾ ಸಮಾರಂಭವು ಐತಿಹಾಸಿಕ ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 13 ರಂದು ರವಿವಾರ ಬೆಳಿಗ್ಗೆ 10.30 ರಿಂದ ನಡೆಯಲಿದೆ. ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ವತಿಯಿಂದ ನಡೆಯಲಿರುವ ಅನಿಲ ಎಂಬ ಬಿಸಿಲ ನೆಲದ ಸಂಘರ್ಷದ ಒಡನಾಡಿಯೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಬಿ.ಶ್ರೀನಿವಾಸ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಉದ್ಘಾಟನೆಯನ್ನು ಮುಂಬಯಿಯ ವಿಜಯ ಸುರ್ವಾಡೆ ಮುಂಬಯಿ ನೇರವೇರಿಸುವರು. ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಪುಸ್ತಕದ 2ನೇ ಆವೃತ್ತಿ ಬಿಡುಗಡೆ ಯನ್ನು ಡಾ. ಮೂಡ್ನಾಕೂಡ ಚಿನ್ನಸ್ವಾಮಿ ನೇರವೇರಿಸುವರು.

ಮುಖ್ಯ ಅತಿಥಿಗಳಾಗಿ ಡಾ. ಆರ್ ಸುನಂದಮ್ಮ, ರಾಜು ಅಲಗೂರ ಆಗಮಿಸುವರು. ಅಧ್ಯಕ್ಷತೆಯನ್ನು ರಾಜಶೇಖರ ಯಡಹಳ್ಳಿ ವಹಿಸುವರು.‌ ಶೋಭಾ ಕಟ್ಟಿಮನಿ, ಪ್ರತಿಭಾ ಹೊಸಮನಿ ಉಪಸ್ಥಿತರಿರುವರು. ಅಂದು‌ ಮಧ್ಯಾಹ್ನ ಅನಿಲ ಹೊಸಮನಿಯವರ ಸಾಹಿತ್ಯ ಎಂಬ ವಿಚಾರಗೋಷ್ಢಿ ನಡೆಯಲಿದೆ. ಡಾ. ಸುಜಾತ ಚಲವಾದಿ ಉಪನ್ಯಾಸ ನೀಡುವರು. ಮೋಹನ ಕಟ್ಟಿಮನಿ ಸಂಯೋಜಿಸುವರು. ಬಳಿಮ ಅಭಿಷೇಕ ಚಕ್ರವರ್ತಿ ಇವರಿಂದ ವಿಜಾಪುರ ಜಿಲ್ಲೆಯ ದಲಿತ ಚಳುವಳಿ ಮತ್ತು ಅನಿಲ ಹೊಸಮನಿ ಎಂಬ ವಿಚಾರಗೋಷ್ಠಿ ನಡೆಸಿಕೊಡುವವರು. ಅದಾದ ಬಳಿಕ ಹಣಮಂತ ಚಿಂಚೊಳಿ ಇವರಿಂದ ಅನಿಲ ಹೊಸಮನಿ: ಜನಪರ ಚಳುವಳಿಗಳ ಒಡನಾಟ, ಡಾ.ಓಂಕಾರ ಕಾಕಡೆ ಇವರಿಂದ ಅನಿಲ ಹೊಸಮನಿ: ಪತ್ರಿಕಾ ಬರಹ- ಬದುಕು ಎಂಬ ವಿಚಾರ ಗೋಷ್ಠಿ ನಡೆಯಲಿವೆ. ಸಾಯಂಕಾಲ ಅನಿಲ ಹೊಸಮನಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಬಳಿಕ ಗೌರವಾರ್ಪಣೆ ಮತ್ತು ಸಮಾರೋಪ ಹಾಗೂ ಒಡನಾಡಿಗಳ ಮಾತು ಕಾರ್ಯಕ್ರಮ ನಡೆಯಲಿದೆ.

Tags:

error: Content is protected !!