ವರ್ಷಗಳ ಕಾಲ ರಾಜಕೀಯ ಭಿನ್ನಾಭಿಪ್ರಾಯದಿಂದ ದೂರವಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೋಳಿ ಹಲವು ದಿನಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆಯ ಪೂರ್ವಸಿದ್ಧತೆ ಸಭೆ ಇಂದು ನಡೆಯಿತು. ಈ ಸಭೆಯಲ್ಲಿ ಇಬ್ಬರೂ ಸಹೋದರರು ಭಾಗವಹಿಸಿ, ಒಂದೇ ವೇದಿಕೆಯಲ್ಲಿ ಕುಳಿತು ಅಧಿಕಾರಿಗಳ ಜೊತೆ ಜಾತ್ರೆಯ ತಯಾರಿ ಕುರಿತಂತೆ ಚರ್ಚಿಸಿದರು. ಅವರ ನಡುವೆ ನೇರ ಸಂಭಾಷಣೆ ಕಡಿಮೆಯಿದ್ದರೂ, ಇಬ್ಬರು ಜಾತ್ರೆಯ ಮಹತ್ವವನ್ನು ಅರಿತು ಒಂದೇ ವೇದಿಕೆಯಲ್ಲಿ ಸೇರಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಕಪಕ್ಕ ಕುಳಿತುಕೊಂಡಿದ್ದರೂ ಮುಖ ಮುಗುಳ್ನಗೆ ಬದಲಾಯಿಸದೆ ಮಾತುಕತೆ ನಡೆಸಿದ ದೃಶ್ಯ, ರಾಜಕೀಯ ಪ್ರೇಕ್ಷಕರ ಗಮನ ಸೆಳೆಯಿತು. ಆದರೂ ಗ್ರಾಮದೇವತೆ ಜಾತ್ರೆ ಎಂಬ ಸಂಸ್ಕೃತಿ ಹಾಗೂ ನಂಬಿಕೆಗೆ ಆದ್ಯತೆ ನೀಡಿ ಅವರು ಒಂದೆಡೆ ಸೇರುವುದರಿಂದ ಈ ಸಂಭ್ರಮಕ್ಕೆ ಬಣ್ಣ ಸೇರ್ಪಡೆಯಾಯಿತು.
ತಮ್ಮ ಜನಪ್ರಿಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಕಂಡ ಜನತೆ ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಸ್ಥಳೀಯ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಹಲವರು ಉಪಸ್ಥಿತರಿದ್ದರು.
Gokak
ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೋಳಿ ಬ್ರದರ್ಸ್
