Kagawad

ಕಾಗವಾಡ ತಾ. ಐನಾಪೂರದ ಶ್ರೀ ಸಿದ್ದೇಶ್ವರ ಸಸ್ಯೋದ್ಯಾನದಲ್ಲಿ ಹಸಿರು ಗ್ರಂಥಾಲಯಕ್ಕೆ ಚಾಲನೆ ನೀಡಿದ ಶಾಸಕ ರಾಜು ಕಾಗೆ

Share

ವೃಕ್ಷ ಕಡೆದವನು, ಭಿಕ್ಷೆ ಬೇಡವೋನು, ನನ್ನ ಹಸಿರು, ನಿನ್ನ ಉಸಿರು, ಎಂಬ ಹಿತನುಡಿಗಳು ಎಲ್ಲ ಸಾರ್ವಜನಿಕರ ಮನದಟ್ಟುವಂತೆ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ಅಥಣಿ ಇವರು ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ಸಶೂ ಉಜ್ಞಾನ ದಲ್ಲಿ ಹಸಿರು ಗ್ರಂಥಾಲಯ ಪ್ರಾರಂಭಿಸಿದ್ದು ಇದರ ಉದ್ಘಾಟನೆ ಕಾಗವಾಡ ಶಾಸಕ ರಾಜು ಕಾಗೆ ಇವರು ನೆರವೇರಿಸಿ ಅರಣ್ಯ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳವಾರ ಮುಂಜಾನೆ ಐನಾಪುರ ಪಟ್ಟಣದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವರ ಮಂದಿರ ಹತ್ತಿರ 13 ಎಕರೆ ಕ್ಷೇತ್ರದ ಶ್ರೀ ಸಿದ್ದೇಶ್ವರ ಕೇರೆ ಅಭಿವೃದ್ಧಿ ಗೊಳಿಸಿ ಸುಮಾರು ನಾಲ್ಕು ಸಾವಿರ ಸಸಿಗಳನ್ನು ನಟಿ ಅವುಗಳನ್ನು ಬೆಳೆಸಿ ಎಲ್ಲ ಸಾರ್ವಜನಿಕರಿಗಾಗಿ ಒಂದು ಹೆಸರಾಂತ ಉದ್ಯಾನ ನಿರ್ಮಿಸಿದ್ದಾರೆ.

ಹಚ್ಚು ಹಸಿರಾಗಿ ಪರಿವರ್ತನೆಗೊಂಡಿರುವ ಉದ್ಯಾನದಲ್ಲಿ ಪಟ್ಟಣದ ಹಾಗೂ ಹೊರ ಗ್ರಾಮದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏಕಾಗ್ರತೆಯಿಂದ ಓದಿ ತಮ್ಮ ಭವಿಷ್ಯ ನಿರ್ಮಿಸಲು ಅರಣ್ಯ ಇಲಾಖೆ ವತಿಯಿಂದ ಹಸಿರು ಗ್ರಂಥಾಲಯ ನಿರ್ಮಿಸಿದ್ದಾರೆ, ಇಲ್ಲಿಗೆ ಕೆಎಎಸ, ಐಪಿಎಸ, ಎಂಬಿಬಿಎಸ, ಪಿಎಸ್ಐ, ಪಿಡಿಯೋ ಸೇರಿದಂತೆ ಅನೇಕ ಉನ್ನತ ಹುದ್ದೆಗಳಗಾಗಿ ಅವಶ್ಯಕತೆ ಇರುವ ಎಲ್ಲ ಪುಸ್ತಕಗಳ ವ್ಯವಸ್ಥೆ ಈ ಗ್ರಂಥಾಲಯದಲ್ಲಿ ಮಾಡಲಾಗಿದ್ದು ಈ ಪುಸ್ತಕಗಳು ಉಚಿತವಾಗಿ ಲಭ್ಯವಿದೆ ಇವುಗಳನ್ನು ಓದಿ ಅಧ್ಯಯನ ಮಾಡಲು ಬಳಸುವ ವ್ಯವಸ್ಥೆ ಮಾಡಿದ್ದಾರೆ. ಇದು ರಾಜ್ಯದಲ್ಲಿ ಪ್ರಪ್ರಥಮ ಪ್ರಯೋಗವಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿ ಇದೇ ರೀತಿ ಕ್ಷೇತ್ರದ ಇನ್ನುಳಿದ ಗ್ರಾಮಗಳಲ್ಲಿ ಸಸಿಗಳನ್ನು ನಟಿ ಪರಿಸರ ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಿರಿ ಅಲ್ಲದೆ ಇಂದಿನ ವಿದ್ಯಾರ್ಥಿಗಳಿಗೆ ಸಿದ್ದೇಶ್ವರ ಸ್ವಾಮೀಜಿ ಹಾಗೂ ಇನ್ನುಳಿದ ಜೈನ ಮುನಿಗಳ ವಿಚಾರಗಳನ್ನು ತಿಳಿದುಕೊಳ್ಳಲು ಒಳ್ಳೆ ಪುಸ್ತಕಗಳನ್ನು ಇಲ್ಲಿಗೆ ನೀಡಿರಿ ಅವುಗಳನ್ನು ಓದಿ ಅವರ ಜೀವನದಲ್ಲಿ ಬದಲಾವಣೆ ತರಲು ಸಹಾಯವಾಗಲಿದೆ.
ಖಾಲಿ ಉಳಿದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದರು.
ಅರಣ್ಯ ಇಲಾಖೆಯ ವಲಯ ಅಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ ಐನಾಪುರದ ಶ್ರೀ ಸಿದ್ದೇಶ್ವರ ಶಶಿಯೋ ಉಧ್ಯಾನ ದಲ್ಲಿ ಪ್ರಥಮ ಬಾರಿಗೆ ಹಸಿರು ಗ್ರಂಥಾಲಯ ಪ್ರಾರಂಭಿಸಿದ್ದು ಇಲ್ಲಿಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಳಸುವ ಪುಸ್ತಕಗಳ ವ್ಯವಸ್ಥೆ ಮಾಡಲಾಗಿದೆ, ಇದನ್ನು ಯುವಕರು ಬಳಸಿ ಸಮಾಜದಲ್ಲಿ ಒಳ್ಳೆ ಅಧಿಕಾರಿ ಎಂದು ಹೊರಹೊಮ್ಮಿರಿ ಎಂದು ಕರೆ ನೀಡಿದರು.

ಶಾಸಕ ರಾಜು ಕಾಗೆ ಇವರಿಂದ ಸಸಿನಟ್ಟಿ ಬಳಿಕ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಆಗಮಿಸಿದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣಾ ವಾಲಿ, ಉಪತಹಸಿಲ್ದಾರ
ಅಣ್ಣಾಸಾಹೇಬ ಕೊರೆ, ಐನಾಪುರ ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ ಸಂಜಯ ಬಿರಡಿ ಹಿರಿಯರಾದ
ಆದಗೌಡ ಪಾಟೀಲ, ಸುಭಾಷ ಪಾಟೀಲ, ಚಮನರಾವ್ ಪಾಟೀಲ, ರಾಜುಗೌಡ ಪಾಟೀಲ, ಅರವಿಂದ ಕಾರಚಿ, ದಾದಾ ಜಂತನ್ನವರ, ಶೀತಲ ಬಾಲೋಜಿ, ಸಂಜಯ ಕುಸನಾಳೆ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಎನ್ ಬಿ ನದಾಫ, ಎಂ. ಎಸ. ಮಾಹುಲಿ, ಆರ್ ಎಂ ಹೊಸಪೇಟೆ, ವಿನೋದ ಮಾಲಗಾವೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು.

Tags:

error: Content is protected !!