BELAGAVI

ಧಾರವಾಡ ಜಿಲ್ಹೆ ಬೇಲೂರ ಗ್ರಾಮದಿಂದ ಪಂಡರಪುರಕ್ಕೆ ಹೋಗುವ ದಿಂಡಿ ಪಾದಯಾತ್ರೆ ಬೆಳಗಾವಿಗೆ

Share

ಧಾರವಾಡ ಜಿಲ್ಲೆ, ಬೇಲೂರು ಗ್ರಾಮದಿಂದ ಪಂಢರಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬೆಳಗಾವಿಯ ಮಹಾಂತೇಶ ನಗರದ ಭಕ್ತರ ಮನೆಗೆ ಸೋಮವಾರ ದಿಂಡಿ ಯಾತ್ರೆ ಆಗಮನವಾಯಿತು

ದೇಹು, ಆಳಂದಿ ಮಾರ್ಗವಾಗಿ ಪಂಢರಪುರಕ್ಕೆ ಹೋಗುವ ಆಷಾಢ ವಾರೀ ದಿಂಡಿ, ನ್ಯಾಯವಾದಿ ಮಹಾಂತೇಶ ನಗರದ ಸದಾಶಿವ ಹಿರೇಮಠರ ಮನೆಗೆ ತಲುಪಿತು. ಸದಾಶಿವ ಅವರ ಕುಟುಂಬದವರು ದಿಂಡಿಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತದನಂತರ ಎಲ್ಲರು ಸೇರಿ ಭಜನೆ ಮತ್ತು ಕೀರ್ತನ ಕಾರ್ಯಕ್ರಮ ಮಾಡಿದರು . ದಿಂಡಿಯಲ್ಲಿ ಬಂದ ವಾರಕರಿ ಗಳಿಂದ ಹರಿನಾಮ ಭಜನೆ ಮತ್ತು ಮಂಗಳಾರುತಿ ನಡೆಯಿತು. ಅನಂತರ ಸಮಸ್ತ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೋಮಶೇಖರ ಹಿರೇಮಠ, ವಿಜಯ ಪಾಟೀಲ, ಗಿರೀಶ ಬಾಳೇಕುಂದ್ರಿ, ಭರತ ಅನಗೋಳ, ನಗರಸೇವಕರಾದ ರಾಜಶೇಖರ ಡೋಣಿ, ಶ್ರೀಕಾಂತ್ ಸಂಬ್ರೇಕರ್, ರಾಜೇಶ್ ಕದಂ, ವಕೀಲೆ ಜಯಶ್ರೀ ಮಂದ್ರೋಳಿ ಹಾಗೂ ಮಹಂತೇಶ ನಗರದ ಎಲ್ಲ ಭಕ್ತರು ಪಾಲ್ಗೊಂಡಿದ್ದರು. ನಂತರ ದಿಂಡಿ ಪಾದಯಾತ್ರೆ ಪಂಡರಪುರದ ಕಡೆಗೆ ಪ್ರಯಾಣ ಬೆಳೆಸಿತು.

Tags:

error: Content is protected !!