ಹಿಂದೂಗಳು ಆಶಿರ್ವಾದದಿಂದ ನಾನು ಸುರಕ್ಷಿತವಾಗಿದ್ದೇನೆ. ಈ ಹಿಂದೆ ಆಗಿರೋದನ್ನು ಇದೀಗ ಪ್ರಸ್ತಾಪ ಮಾಡೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದಲ್ಲಿಯೂ ಯಾವುದೇ ಸಮಸ್ಯೆ ಆಗಿಲ್ಲ..ಇದೀಗ ಕೂಡಾ ಸುರಕ್ಷಿತೆಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ಭಾಯಿ ತೊಗಾಡಿಯಾ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ಆ ಕಾರ್ಯ ಇದೀಗ ಪೂರ್ಣಗೊಂಡಿದೆ. ಇಂದು ಕೋಟ್ಯಂತರ ಹಿಂದೂಗಳಿಗೆ ಸಹಾಯ ಮಾಡೋ ಕೆಲಸ ಆರಂಭವಾಗಿದೆ. ಹಿಂದೂ ಹೆಲ್ಪ ಲೈನ್ ಆರಂಭ ಮಾಡಿದ್ದೇವೆ. ಹಿಂದೂಗಳಿಗೆ ಅನೇಕ ವಿಷಯಗಳಲ್ಲಿ ಸಹಾಯ ಮಾಡಲು ಹೆಲ್ಪಲೈನ್ ಹಿಂದೂಗಳು ಯಾರು ಹಸಿವಿನಿಂದ ಬಳಲಬಾರದು. ಅದಕ್ಕಾಗಿ ಬಡ ಹಿಂದೂಗಳಿಗೆ ಉಚಿತ ಆಹಾರ ಧಾನ್ಯ ನೀಡುತ್ತಿದ್ದೇವೆ. ಹಿಂದೂಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದೇವೆ ಎಂದರು.
ಹಿಂದೂ ಪಕ್ಷ ಆರಂಭ ಮಾಡುವ ಯಾವುದೇ ವಿಚಾರ ಇಲ್ಲ. ಭಾರತವೇ ಹಿಂದೂ ರಾಷ್ಟ್ರವಾಗಿದೆ.
ಅದನ್ನು ಹಿಂದೂ ರಾಷ್ಟ್ರ ಮಾಡುವ ಅವಶ್ಯಕತೆ ಇಲ್ಲ. 1947 ರಿಂದ ಭಾರತ ಮುನ್ನುಗ್ಗುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದೆ. ಭಾರತವೇ ಮಹಾನವಾಗಿದೆ, ಅದನ್ನು ರಾಜಕೀಯ ಪಕ್ಷಗಳಿಂದ ಮಹಾನ ಮಾಡೋದು ಸರಿಯಲ್ಲ ಎಂದರು.
ನಾವು ಹೆಸರಿಗಾಗಿ ರಾಮ ಮಂದಿರಕ್ಕಾಗಿ ಆಂದೋಲನ ಮಾಡಲಿಲ್ಲ.ರಾಮ ಮಂದಿರಕ್ಕಾಗಿ ಮಾಡಿದೆವು, ಅದು ಯಶಸ್ವಿಯಾಗಿದೆ. ಹಿಂದೂಗಳ ಮೇಲೆ ಸುಳ್ಳು ಕೇಸ್ ಹಾಕಬಾರದು. ಹಾಕಿದರೆ ನಾವು ಹೋರಾಟ ಮಾಡುತ್ತೇವೆ. ದೇಶದ ಅನೇಕ ಕಡೆ ಹಿಂದೂಗಳು ಮೇಲೆ ಹಲ್ಲೆಗಳಾಗುತ್ತಿವೆ. ಹೀಗಾಗಿ ಹಿಂದೂ ಗಳ ಸುರಕ್ಷಿತೆಗಾಗಿ ಹೋರಾಡುತ್ತೇವೆ. ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿರಬೇಕು ಎಂದರು.
ಆಪರೇಷನ್ ಸಿಂಧೂರ್ ವಿಚಾರಕ್ಕೆ ಪ್ರತಿಕ್ರಿಯಿಸಿ,
ಪಾಕಿಸ್ತಾನದ ಒಳನುಗ್ಗಿ ಹೊಡೆದಿರೋದು ಉತ್ತಮ.
ಇನ್ನಷ್ಟು ಹೊಡೆದಿದ್ದರೆ ಇನ್ನು ನಮ್ಮ ಜನರಿಗೆ ಖುಷಿಯಾಗುತ್ತಿತ್ತು. ದೇಶದಲ್ಲಿ ಸಂತಾನೋತ್ಪತ್ತಿ ಕಡಿಮೆಯಾಗುತ್ತಿದೆ. ಹಿಂದೂಗಳದ್ದು 1.7 ರಷ್ಟಿದೆಇದು ಇಡೀ ದೇಶಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ.
ತೀನ್ ಬಚ್ಚೆ ಹಿಂದೂ ಸಚ್ಚೆ ಅನ್ನೋದು ನಮ್ಮ ಉದ್ದೇಶವಾಗಿದೆ ಎಂದರು.