BELAGAVI

ಕಾಲ್ತುಳಿತದಲ್ಲಿ 11 ಜನರು ಬಲಿ…ಸಿಎಂ-ಡಿಸಿಎಂ ಕೂಡಲೇ ರಾಜೀನಾಮೆ ನೀಡಲಿ

Share

ಬೆಂಗಳೂರು ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಲು ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಆರೋಪಿಸಿ ಇಂದು ಬೆಳಗಾವಿಯಲ್ಲಿ ಬಿಜೆಪಿಯ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಫಲಕಗಳನ್ನು ಹಿಡಿದು ಬಂದ ಬೆಳಗಾವಿ ಬಿಜೆಪಿಯ ಪದಾಧಿಕಾರಿಗಳು ಆರ್.ಸಿ.ಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಲು ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಆರೋಪಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಕಾಲ್ತುಳಿತದಲ್ಲಿ 11 ಜನರ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ಇದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷತನದ ಫಲಿತಾಂಶ. ಯಾವುದೇ ಪೂರ್ವ ನಿಯೋಜನೆಯಿಲ್ಲದೇ, ಅನುಮತಿಯಿಲ್ಲದೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಿಎಂ-ಡಿಸಿಎಂ ಅವರ ಭಿನ್ನಾಭಿಪ್ರಾಯದಿಂದಲೇ ಅವಘಡ ಸಂಭವಿಸಿದೆ. ಯಾರೂ ಸತ್ತರೂ ಕೂಡ ಕ್ಯಾರೆ ಎನ್ನದೇ ಸರ್ಕಾರ ಕೇವಲ ಅಧಿಕಾರ ಅನುಭವಿಸುತ್ತಿದೆ. ದೇಶದ ಬಗ್ಗೆ ನಾಚಿಕೆ ಮತ್ತು ಗೌರವವಿದ್ದರೇ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಅವರು, ಆರ್.ಸಿ.ಬಿ ಐ.ಪಿ.ಎಲ್ ಗೆದ್ದ ವೇಳೆ ಕೇವಲ ಫೋಟೋ ಶೂಟ್ ಮಾಡಲೂ ಹೋಗಿ ಸಿಎಂ ಮತ್ತು ಡಿಸಿಎಂ 11 ಜನರ ಸಾವಿಗೆ ಕಾರಣರಾಗಿದ್ದಾರೆ. ತಕ್ಷಣ ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಬೇಕು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸೇವಕ ಹಣಮಂತ ಕೊಂಗಾಲಿ, ನಗರಸೇವಕ ರಾಜಶೇಖರ್ ಢೋಣಿ, ಉಜ್ವಲಾ ಬಡವಣ್ಣಾಚೆ, ವಿಜಯ ಕೊಡಗಾನೂರ, ಶಿಲ್ಪಾ ಕೇಕರೆ, ಸದಾನಂದ ಗುಂಟೇಪ್ಪನ್ನವರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!