ಬೆಳಗಾವಿ: ಒಗ್ಗಟ್ಟು , ಆತಿಥ್ಯ ಮತ್ತು ಶ್ರಮವಹಿಸುವಲ್ಲಿ ಬಂಟರ ಯಾನೆ ನಾಡವರ ಸಮಾಜ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ನ್ಯೂ ಗಾಂಧಿ ನಗರದಲ್ಲಿ ಬಂಟರ ಯಾನೆ ನಾಡವರ ಸಂಘದ ನವೀಕೃತ ಬಂಟರ ಭವನದ ಉದ್ಘಾಟನಾ ಸಮಾರಂಭ ಮಾಣಿಕ್ಯ ಸಂಭ್ರಮ 2025ನ್ನು ಹಮ್ಮಿಕೊಳ್ಳಲಾಗಿತ್ತು,ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್, ಚಿಕ್ಕೋಡಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಡಾ. ಕೆ. ಪ್ರಕಾಶ್ ಶೆಟ್ಟಿ, ವಕ್ವಾಡಿ ಪ್ರವೀಣಕುಮಾರ್ ಶೆಟ್ಟಿ, ಜಯಶೀಲ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಂಟ ಸಮಾಜ ಅತಿಥಿಗಳ ಆತಿಥ್ಯಕ್ಕೆ ಹೆಸರುವಾಸಿ. ಬಂಟ ಸಮಾಜದವರು ತಾವು ಬೆಳೆದು ಬೆಳೆಸುವ ಹೃದಯ ಶ್ರೀಮಂತಿಕೆ ಹೊಂದಿದವರು. ಶ್ರಮ ಜೀವಿಗಳಾದ ಬಂಟರಲ್ಲಿರುವ ಒಗ್ಗಟ್ಟು ಇತರರಿಗೆ ಮಾದರಿ. ದೇಶಕ್ಕೆ ಬಂಟ ಸಮಾಜ ಕೊಡುಗೆ ಅಪಾರವಾಗಿದ್ದು, ಅವರಿಂದ ಹಲವಾರು ವಿಷಯಗಳನ್ನು ಕಲಿಯಬಹುದಾಗಿದೆ. ಸಮಾಜವು ಇನ್ನಷ್ಟು ಮುಂದುವರೆಯಲಿ ಎಂದು ಹಾರೈಸಿದರು.
ಉತ್ತರ ಶಾಸಕ ಆಸೀಫ್ ಸೇಠ್ ಅವರು ಬಂಟರ ಸಮಾಜವನ್ನು ಒಗ್ಗಟ್ಟತೆಯನ್ನು ಪ್ರದರ್ಶಿಸುತ್ತದೆ. ಬಂಟರು ಶ್ರಮ ಜೀವಿಗಳು ಎಂದರು.
ಚಿಕ್ಕೋಡಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಬಂಟರ ಸಮಾಜ ಅತ್ಯಂತ ಪ್ರಗತಿ ಪಥದಲ್ಲಿ ಸಾಗಿರುವ ಸಮಾಜವಾಗಿದೆ. ಬಂಟರ ಸಮಾಜ ಎಲ್ಲ ಕ್ಷೇತ್ರದಲ್ಲಿಯೂ ಅಗ್ರಗಣ್ಯ ಸ್ಥಾನದಲ್ಲಿದೆ. ಬಂಟರ ಪಾರಂಪರೀಕ ಸಂಸ್ಕೃತಿಯನ್ನು ಭವಿಷ್ಯದ ಪೀಳಿಗೆಯೂ ಕೂಡ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಇನ್ನು ಮ್ಯೂಸಿಕ್ ಡೈರೆಕ್ಟರ್ ಗುರುಕಿರಣ್ ಅವರು ಬೆಳಗಾವಿಯ ಕುಂದಾ ಎಷ್ಟೇ ಖ್ಯಾತಿಯೋ ಅಷ್ಟೇ ಒಳ್ಳೆಯ ಜನರು ಬಂಟರನಾಡು ಕುಂದಾಪುರದ ಜನರು. ಪ್ರತಿ ರಂಗದಲ್ಲಿಯೂ ಬಂಟರನ್ನು ಕಾಣಬಹುದು ಎಂದರು.
ಫಾರೆನ್ಸಿಕ್ ಎಕ್ಸಪರ್ಟ್ ಮತ್ತು ಮೆಡಿಕಲ್ ಲೀಗಲ್ ಕನ್ಸಲ್ಟಂಟ್ ಪ್ರೋ.ಡಾ. ಮಹಾಬಲೇಶ್ ಶೆಟ್ಟಿ ಅವರು ಬೆಳಗಾವಿಯೂ ತಮ್ಮ ಎರಡನೇಯ ತವರೂರಾಗಿದೆ. ಬಂಟರು ಪ್ರತಿಯೊಂದು ದೇಶದಲ್ಲಿ ಇರುವ ಬಾಂಧವರಾಗಿದ್ದಾರೆ. ಬಂಟರು ಯಾವುದೇ ದೇಶಕ್ಕೆ ಯಾವುದೇ ಪ್ರದೇಶಕ್ಕೆ ಹೋದರು ಅವರಲ್ಲಿ ಒಂದಾಗಿ ಬಾಳುತ್ತಾರೆ. ಬಂಟರ ಸಮಾಜದಲ್ಲಿ ಮಾತೃತ್ವತೆಯ ಭಾವನೆ ಅಧಿಕವಾಗಿರುತ್ತದೆ ಎಂದರು. ಬೈಟ್
ಇನ್ನು ಪ್ರಕಾಶ್ ಶೆಟ್ಟಿ ಅವರು ಈ ಭಾಗದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಬಂಟರು ಒಗ್ಗಟ್ಟಿನಿಂದ ಇರುವುದನ್ನು ಕಂಡು ಹೆಮ್ಮೆ ಎನಿಸುತ್ತದೆ. ಬಂಟರ ಜನಸಂಖ್ಯೆಯ ಅನುಗುಣವಾಗಿ ಇನ್ನಷ್ಟು ದೊಡ್ಡ ಬಂಟರ ಭವನವನ್ನು ನಿರ್ಮಿಸುವ ಅವಶ್ಯಕತೆಯಿದ್ದು, ಬಂಟರ ಭವನದ ನಿರ್ಮಾಣ ಕಾರ್ಯಕ್ಕೆ ತಾವು ಕೂಡ ಕೈಜೋಡಿಸುವುದಾಗಿ ತಿಳಿಸಿದರು.
ಈ ವೇಳೆ ಪಟ್ಲ ಶೆಟ್ಟಿ, ಹಸ್ತ ಶೆಟ್ಟಿ, ಡಾ. ಮಹಾಬಲೇಶ್ ಶೆಟ್ಟಿ, ವಿಠ್ಠಲ ಹೆಗ್ಡೆ, ಮೈರ್ಮಾಡಿ ಶೆಟ್ಟಿ, ಚೇತನ್ ಶೆಟ್ಟಿ, ರವೀಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಪ್ರಸನ್ನ ಶೆಟ್ಟಿ, ಆರ್. ಕರುಣಾಕರ ಶೆಟ್ಟಿ ಹಿಡ್ಕಲ್, ಪ್ರಣಯ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.