Hukkeri

ಹುಕ್ಕೇರಿ ಕ್ಷೇತ್ರದಲ್ಲಿ ಜೆ ಜೆ ಎಂ ಕಾರ್ಯ ಪೂರ್ಣಗೋಳಿಸಿ – ಶಾಸಕ ಕತ್ತಿ.

Share

ಹುಕ್ಕೇರಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜರಗುತ್ತಿರುವ ಜಲ ಜೀವನ‌ ಮಿಷನ್ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೋಳಿಸುವಂತೆ ಹುಕ್ಕೇರಿ ಶಾಸಕ ನೀಖಿಲ್ ಕತ್ತಿ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಭಿಯಂತರ ವಿನಾಯಕ ಪೂಜೇರಿ ಮತ್ತು ಗುತ್ತಿಗೆದಾರರಿಗೆ ನಿರ್ದೆಶನ ನೀಡಿದರು.
ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ನಾಲ್ಕನೆ ತ್ರೈಮಾಸಿಕ ಕೆ ಡಿ ಪಿ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ವಿವಿಧ ಇಲಾಖೆ ಅಧಿಕಾರಿಗಳಿಂದ ಪ್ರಗತಿ ಪರಿಶೀಲಿಸಿದರು.
ಮುಖಂಡ ಬಸವರಾಜ ಕೋಳಿ ಮಾತನಾಡಿ ಗ್ರಾಮಿಣ ಪ್ರದೇಶದಲ್ಲಿ ಜೆ ಜೆ ಎಂ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಪ್ರತಿ ಮನೆಗಳಿಗೆ ಯಾವಾಗ ಶುದ್ಧ ಕುಡಿಯುವ ನೀರು ದೊರೆಯುವದು ಎಂದು ಕೇಳಿದಾಗ.
ಅಭಿಯಂತರ ವಿನಾಯಕ ಪೂಜೆರಿ ಮಾತನಾಡಿ ಈಗಾಗಲೇ ಮೊದಲನೆ ಹಂತತ ಕಾಮಗಾರಿ ಮುಕ್ತಾಯವಾಗಿ ಎರಡನೇ ಹಂತದಲ್ಲಿವೆ ಆದರೆ ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿಲ್ಲಾ ಇದರಿಂದ ಕಾಮಗಾರಿಗಳು ನಿಧಾನ ಹಂತದಲ್ಲಿ ಸಾಗಿವೆ ಎಂದರು.
ಇದಕ್ಕೆ ಶಾಸಕ ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ಲಾ ಎಂದು ಕಾಮಗಾರಿ ನಿಲ್ಲಬಾರದು ಗುತ್ತಿಗೆದಾರರು ತಮಗೆ ನಿಡಿದ ಕಾಮಗಾರಿಗಳನ್ನು ಪೂರ್ಣ ಗೋಳಿಸಿ ಆಯಾ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಿ ತಮ್ಮ ಟೆಂಡರ ಹಣದ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವದು ಎಂದರು
ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳ್ಳಿ, ತಹಸಿಲ್ದಾರ ಮಂಜುಳಾ ನಾಯಿಕ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅದ್ಯಕ್ಷ ಶಾನೂಲ ತಹಸಿಲ್ದಾರ, ಕೆ ಡಿ ಪಿ ನಾಮನಿರ್ದೆಶನ ಸದಸ್ಯರಾದ ಬಸವರಾಜ ಕೋಳಿ, ಗುಲಾಬ ತಹಸಿಲ್ದಾರ, ಸಿದ್ದರಾಮ ಖೋತ, ಕಲ್ಲಪ್ಪ ಕಟ್ಟಿ, ರಾಜು ಅವಟೆ ವಿವಿಧ ಇಲಾಖೆ ಬಿ ಇ ಓ ಪ್ರಭಾವತಿ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ರವೀಂದ್ರ ರಾಯ್ಕರ, ವಿದ್ಯುತ್ ಸಹಕಾರಿ ಸಂಘದ ಅಭಿಯಂತರ ನೆಮಿನಾಥ ಖೆಮಲಾಪೂರೆ, ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!