ಕಾಗವಾಡ: ಜೈನ ಸಮಾಜದ ಅಭಿವೃದ್ಧಿಗಾಗಿ ಹಮ್ಮಿಕೊಂಡ ಜೈನ ಸಮಾಜದ ಮಹಾ ಸಮ್ಮೇಳನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸುಮಾರು ಒಂದು ಲಕ್ಷ ಜೈನಸ್ರಾವಕ ಸ್ರಾವಿಕೆಯರು ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಿದರು ನಿಮ್ಮ ಹಕ್ಕು ನಿಮ್ಮ ಬೇಡಿಕೆಗಳ ಬಗ್ಗೆ ನೀವು ಧ್ವನಿಯಾಗಿ ನಿಂತಿದ್ದಕ್ಕೆ ಎಲ್ಲರಿಗೂ ಶುಭಾಶಯಗಳು ಎಂದು ರಾಷ್ಟ್ರಸಂತ ಗುಣದರನಂದಿ ಮುನಿ ಮಾರಾದರೂ ಹೇಳಿದರು.
ಐನಾಪುರದಲ್ಲಿ ಜೈನ ಸಮಾಜದ ಮಹಾ ಸಮಾವೇಶ ಹಮ್ಮಿಕೊಂಡಿದ್ದರು. ಈ ಸಮಾವೇಶದಲ್ಲಿ ಬೆಳಗಾವಿ ವಿಜಯಪುರ ಬಾಗಲಕೋಟ್ ಜಮಖಂಡಿ ಸಾಂಗ್ಲಿ ಕೊಲ್ಲಾಪುರ್ ಮುಂತಾದ ನಗರಗಳಲ್ಲಿ ಇಂದ ಸುಮಾರು ಒಂದು ಲಕ್ಷ ಜೈನ್ ಸಮಾಜದ ಬಾಂಧವರು ಪಾಲ್ಗೊಂಡಿದ್ದರು ಯಾವುದೇ ಅಪೇಕ್ಷೆ ಪಡದೆ ಸ್ವಂತ ವಾಹನಗಳನ್ನು ತೆಗೆದುಕೊಂಡು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ರಾಜ್ಯಪಾಲರು ಈ ಸಭೆಯಲ್ಲಿ ನಮ್ಮ ಬೇಡಿಕೆಗಳು ಸ್ವೀಕರಿಸಿದ್ದು ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲಿ ನಿರ್ಣಯ ಕೈಗೊಂಡು ಸಮಾಜಕ್ಕೆ ಸ್ವತಂತ್ರ ನಿಗಮ ಸ್ಥಾಪನೆ ಮಾಡಲು ನಾನೇ ಸೂಚಿಸುತ್ತೇನೆ ಎಂದು ಹೇಳಿದ್ದಾರೆ ಅಲ್ಲದೆ ನಮ್ಮ ಇನ್ನುಳಿದ ಬೇಡಿಕೆಗಳಿಗೆ ಅವರು ಸ್ಪಂದಿಸಿದ್ದು ಸಮಾಜದ ಹೋರಾಟಕ್ಕೆ ಜಯ ದೊರೆಯಲಿದೆ. ಜೈನ ಸಮಾಜದ ಅನೇಕ ರಾಜಕೀಯ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಸ್ವಂತ ಖರ್ಚಿನಿಂದ ಹಾಗೂ ಸಮ್ಮೇಳನ ವೆಚ್ಚ ಪರಿಶುದ್ದಾರೆ ಎಲ್ಲರಿಗೆ ಆಶೀರ್ವಾದ ಎಂದು ಸ್ವಾಮೀಜಿ ಹೇಳಿದರು.
ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ