Kagawad

ಐನಾಪುರದಲ್ಲಿ ನಾಳೆ ರಾಜ್ಯಪಾಲರ ಉಪಸ್ಥಿತಿಯಲ್ಲಿ ಬೃಹತ್ ಜೈನ ಸಮಾವೇಶ

Share

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದಲ್ಲಿ ಜೈನ ಸಮಾಜದ ಸಮಾವೇಶದಲ್ಲಿ ರಾಜ್ಯದ ರಾಜ್ಯಪಾಲರು ಪಾಲ್ಗೊಳ್ಳಲು ನಿಮಿತ್ಯ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ.ಮಧ್ಯಾಹ್ನ 1 ಗಂಟೆಗೆ ಬೃಹತ್ ಸಮಾವೇಶ ಜರುಗಲಿದೆ, ಎಂದು ಜೈನ ಸಮಾಜದ ರಾಷ್ಟ್ರ ಸ್ವಂತ ಗುಣದರು ನಂದಿ ಮುನಿ ಮಹಾರಾಜರು ಹೇಳಿದರು.

ಶನಿವಾರ ಸಂಜೆ ಐನಾಪುರದಲ್ಲಿ ಇನ ಮಾಹಿತಿದೊಂದಿಗೆ ಮಾತನಾಡುವಾಗ ಕಳೆದ ಅನೇಕ ದಿನಗಳಿಂದ ಈ ಸಮಾವೇಶಕ್ಕೆ ರಾಜ್ಯಪಾಲರನ್ನು ಆಮಂತ್ರಿಸಲಾಗಿದ್ದು ಆದರೆ ಅವರ ಉಪಸ್ಥಿತಿ ಬಗ್ಗೆ ಕೆಲ ಸಂಖ್ಯೆಗಳನ್ನು ವ್ಯಕ್ತಪಡಿಸುತ್ತಿದ್ದರು, ಆದರೆ ರಾಜ್ಯಪಾಲರು ಮಧ್ಯಾಹ್ನ 1 ಗಂಟೆಗೆ ಆಗಮಿಸುವುದು ನಿಶ್ಚಿತವಾಗಿದೆ.

ಜೈನ ಸಮಾಜದ ಪ್ರಮುಖ ಬೇಡಿಕೆಗಳಲ್ಲಿಯೇ ಸಮಾಜಕ್ಕೆ ಸ್ವತಂತ್ರ ನಿಗಮ ಸ್ಥಾಪನೆ ಆಗಬೇಕು. ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಿಶುವೇತನ ನೀಡಲೇಬೇಕು. ಸಮಾಜದ ಮೇಲೆ ಬೇರೆ ಬೇರೆ ರೀತಿಯ ಅನ್ಯಾಯವಾಗುತ್ತಿದ್ದು ಅವುಗಳನ್ನು ಸರಿಪಡಿಸಬೇಕೆಂದು ನಮ್ಮ ಬೇಡಿಕೆಗಳಾಗಿದ್ದು ಈ ಎಲ್ಲ ಬೇಡಿಕೆಗಳು ರಾಜ್ಯಪಾಲರ ಮುಂದೆ ಮಂಡಿಸುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.ಸೋಂದ ಜೈನ ಮಠದ ಭಟ್ಟರಕ್ಕ ಸ್ವಾಮೀಜಿ ಮಾಹಿತಿ ನೀಡುವಾಗ ರಾಷ್ಟ್ರಸಂಸ್ಥೆ ಗುಣಧರನಂದಿ ಮುನಿ ಮಹಾರಾಜರು ಕೈಗೊಂಡಿರುವ ಈ ಸಮಾವೇಶದಲ್ಲಿ ದೇಶ್ಯಾದಂತ ಎಲ್ಲ ಜೈನ ಮಠಗಳ ಭಟ್ಟರಕ್ಕ ಸ್ವಾಮೀಜಿಗಳು ಪಾಲ್ಗೊಂಡಿದ್ದು ಈ ಬೇಡಿಕೆಗಳಿಗೆ ನಾವು ಬೆಂಬಲಿಸುತ್ತಿದ್ದೇವೆ. ರಾಜ್ಯಪಾಲರೊಂದಿಗೆ ಜಿಲ್ಲೆಯ ಸಚಿವರು ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಅವರೊಂದಿಗೆ ತಮಿಳುನಾಡು ಜೈನ್ ಮಠದ ಭವನಕೀರ್ತಿ ಸ್ವಾಮೀಜಿ ಪಾಲ್ಗೊಂಡಿದ್ದರು.

Tags:

error: Content is protected !!