Kagawad

ಉಗಾರಬುದ್ರುಕ್ ಸಹಕಾರಿ ಸಂಸ್ಥೆಯ ಶತಮಾನೋತ್ಸವ…. ರೈತರ ಸಾಲಕ್ಕಾಗಿ ರಾಜ್ಯಕ್ಕೆ ನೀಡುವ ಅನುದಾನ- ಕೇಂದ್ರದಿಂದ ತಾರತಮ್ಯ ಬೇಡ : ಶಾಸಕ ಲಕ್ಷ್ಮಣ ಸವದಿ

Share

ಕಾಗವಾಡ: ಭಾರತ ದೇಶದಲ್ಲಿ ಇನ್ನೋಳದ ರಾಜ್ಯಗಳ ಕಿಂತ ಸಹಕಾರರಂಗ ಕರ್ನಾಟಕ ರಾಜ್ಯದಲ್ಲಿ ಗಟ್ಟಿಯಾಗಿ ಉಳಿದಿದೆ ಅಲ್ಲದೆ ಎಲ್ಲ ರೈತರನ್ನು ಉದ್ಧಾರ ಮಾಡುವ ಕಾರ್ಯ ಕೈಗೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರೈತರಿಗೆ ನೀಡುವ ಸಾಲದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದು, ಇದರಿಂದ ರೈತರ ಅಭಿವೃದ್ಧಿಗಾಗಿ ಈ ಮೊದಲಿನಂತೆ ಶೇಕಡ ೪೦ರಷ್ಟು ಮತ್ತು ರಾಜ್ಯ ಸರ್ಕಾರಕ್ಕೆ ನೀಡಬೇಕು ಎಂದು ಮಾಜಿ ಡಿಸಿಎಂ, ಮಾಜಿ ಸಹಕಾರ ಸಚಿವ ಲಕ್ಷ್ಮಣ್ ಸವದಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಶನಿವಾರರಂದು ಉಗಾರ ಬುದ್ರುಕ ಗ್ರಾಮದಲ್ಲಿಯೇ ಶತಮಾನೋತ್ಸವ ಆಚರಿಸುತ್ತಿರುವ ಉಗಾರ ಬುದ್ರುಕ ಗ್ರಾಮದ ವಿವಿಧ ಉದ್ದೇಶಗಳ ಸಹಕಾರಿ ಸಂಸ್ಥೆಯ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿದರು. ಲಕ್ಷ್ಮಣ್ ಸವದಿ ಮುಂದುವರೆದು ಮಾತನಾಡುವಾಗ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಈ ಮೊದಲು ಸಾಲದ ಸಹಾಯಧನವಾಗಿ ಶೇಕಡ ೭೫ ರಷ್ಟು ಮತ್ತು ಸಾಲವಾಗಿ ನೀಡುತ್ತಿದ್ದರು. ಅದರಲ್ಲಿ ಬದಲಾವಣೆಯಾಗಿ ೬೦ರಷ್ಟು ಮಾಡಿದರು. ಬಳಿಕ ೪೦ ರಷ್ಟು ಮಾಡಿದರು ಈಗ ಕೇವಲ ೧೦% ರಷ್ಟು ಸಾಲದ ಮತ್ತ ನೀಡುತ್ತಿದ್ದಾರೆ. ಉಳಿದ ಮತ್ತು ರಾಜ್ಯ ಸರ್ಕಾರ ಭರಿಸಿ ರೈತರಿಗೆ ಸಾಲದ ರೂಪದಲ್ಲಿ ನೀಡುತ್ತಿದೆ.

ರೈತರ ಆರ್ಥಿಕ ಸ್ಥಿತಿ ಬಲಿಷ್ಠಗೊಳಿಸಬೇಕಾದರೆ ರಾಜ್ಯದ ಕೇಂದ್ರ ಸರ್ಕಾರ ಸಾಲರೂಪದಲ್ಲಿ ಸಹಕಾರ ನೀಡಲೇಬೇಕು. ಇದನ್ನು ಕೇಂದ್ರ ಸರ್ಕಾರ ಗಮನದಲ್ಲಿ ತೆಗೆದುಕೊಂಡು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಸಹಕಾರ ರಂಗದಲ್ಲಿ ಕರ್ನಾಟಕ ರಾಜ್ಯ ಅಧಿಕ ಬಲಿಷ್ಠವಾಗಿದೆ. ಸಾಲ ಮನ್ನಾ ಮಾಡಿದ ಸಮಯದಲ್ಲಿ ಕರ್ನಾಟಕದಲ್ಲಿ ಅಥಣಿ ತಾಲೂಕಿನ ರೈತರಿಗೆ ಸುಮಾರು ೫೦೦ ಕೋಟಿ ಸಾಲ ಮನ್ನಾದ ಲಾಭವಾಗಿದೆ. ಉಗಾರದ ಸಂಸ್ಥೆ ಹೆಸರಾಂತವಾಗಿದ್ದು ನೂರು ವರ್ಷದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಹಿರಿಯರನ್ನು ಸನ್ಮಾನಿಸಿದ್ದು ಈ ಸಂಸ್ಥೆ ೧೨ ಕೋಟಿ ರೈತರಿಗೆ ಸಾಲ ನೀಡಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಮಾತನಾಡಿ ಸಹಕಾರ ರಂಗದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಒಳ್ಳೆಯ ಮಾಹಿತಿ ಪಡೆದಿದ್ದಾರೆ, ಅವರು ಸಹಕಾರ ಸಚಿವರಾಗಿ ರಾಜ್ಯದಲ್ಲಿ ವಿಶೇಷ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿ, ಸಹಕಾರಿ ಸಂಸ್ಥೆಗಳಿAದ ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿ ಮಾಡಿರಿ ಎಂದು ರೈತರಿಗೆ ಕರೆ ನೀಡಿದರು.

ಮಾಜಿ ಶಾಸಕ ಮೋಹನ ರಾವ ಶಹಾ ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಶಿತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವಾಗ ಸಂಸ್ಥೆ ೧೯೨೦ ರಲ್ಲಿ ಆಗಿನ ರೈತರು ಹುಟ್ಟು ಹಾಕಿದ್ದು ಯಶಸ್ವಿಯಾಗಿ ಒಂದು ನೂರು ವರ್ಷ ಪೂರೈಸಿದೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಇವರಿಂದ ಈ ಸಂಸ್ಥೆಗೆ ೧೨ ಕೋಟಿ ರೂಪಾಯಿ ಸಾಲ ರೂಪದಲ್ಲಿ ನೀಡಿದಾರೆ. ಈ ಮೊದಲು ರಾಜ್ಯ ಸರ್ಕಾರ ಸಾಲಮನ್ನಾ ಮಾಡಿತ್ತು. ಆಗ ೯ ಕೋಟಿ ರೂಪಾಯಿ ಇಲ್ಲಿಯ ರೈತರಿಗೆ ಲಾಭವಾಗದೆ. ಸಂಸ್ಥೆಯ ಸಂಸ್ಥಾಪಕರ ವಾರಸದಾರರಿಗೆ ಹಾಗೂ ಮಾಜಿ ಅಧ್ಯಕ್ಷರಿಗೆ ಸಹಕಾರಿ ನೀಡಿದ್ದ ಗಣ್ನರಿಗೆ ಶತಮಾನೋತ್ಸವ ನಿಮಿತ್ಯ ಗೌರವಿಸಿದ್ದೇವೆ ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಭಟ್ಟಾರಕ ಸ್ವಾಮೀಜಿಗಳಿಂದ ಸಂಸ್ಥೆಯ ಕಟ್ಟಡದ ಪೂಜೆ ನೆರವೇರಿಸಿದರು. ಬಳಿಕ ಸಸಿಗೆ ನೀರು ಉನಿಸುವ ಮುಖಾಂತರಾ ಉದ್ಘಾಟನೆ ನಿರ್ವಹಿಸಿದರು. ಸಮಾರಂಭದ ದಿವ್ಯ ಸಾನಿಧ್ಯ ಪ.ಪೂ. ಭಟ್ಟಾರಕ ಸ್ವಾಮಿಜಿಗಳಾದ ಭುವನಕಿರ್ತಿ ಸ್ವಾಮಿಜಿ, ಶ್ರೀ ಧವಲಕಿರ್ತಿ ಸ್ವಾಮಿಜಿ, ಶ್ರೀ ಭಾನುಕಿರ್ತಿ ಸ್ವಾಮಿಜಿ, ಶ್ರೀ ದೇವೆಂದ್ರಕಿರ್ತಿ ಸ್ವಾಮಿಜಿ, ಶ್ರೀ ಲಕ್ಷ್ಮೀಸೇನ ಸ್ವಾಮಿಜಿ, ಶ್ರೀ ಯತೀಶ್ವರಾನಂದ ಸ್ವಾಮಿಜಿ, ಶ್ರೀ ಅಮರೇಶ್ವರ ಸ್ವಾಮಿಜಿ, ಶ್ರೀ ಆನಂದರಾವ ಅಪ್ಪಾಸಾಹೇಬ ಜಾಧವ ಇಂಗಳಿಕರ ಮಹಾರಾಜರು ಇವರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಶೀತಲಗೌಡಾ ಪಾಟೀಲ ಹಾಗೂ ನಿರ್ದೇಶಕರು ಅತಿಥಿಗಳಿಗೆ ಹಾಗೂ ಡಿಸಿಸಿ ಬ್ಯಾಂಕಿನ ಅಧಿಕಾರಿ ಶಿವಪುತ್ರ ಬಾಗೇವಾಡಿ, ಶಂಕರ ನಂದೇಶ್ವರ, ಶಿವಾನಂದ ಬುರುಡ, ಅಭಿಯಂತರಾದ ಆದಿನಾಥ ವಸವಾಡೆ ಇವರನ್ನು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಬಾಹುಬಲಿ ಚಿಂಚವಾಡೆ ಇವರು ಸನ್ಮಾಸಿದರು.

ಸುಕುಮಾರ ಬನ್ನೂರೆ
ಇನ್ನ ನ್ಯೂಜ್ ಕಾಗವಾಡ

Tags:

error: Content is protected !!