ಮೇ ತಿಂಗಳಿನಲ್ಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆ ಆರಂಭಗೊಂಡಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆ ಆರಂಭಗೊಂಡಿದ್ದು, ಅನ್ನದಾತ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ. 2019 ರ ನಂತರ ಮತ್ತೆ ಮೇ ತಿಂಗಳಲ್ಲಿಯೇ ಈ ವರ್ಷ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಸಕಾಲಕ್ಕೆ ಮುಂಗಾರು ಆರಂಭವಾಗಿದ್ದು, ಜಿಲ್ಲೆಯಲ್ಲಿ ಹೆಸರು,ಈರುಳ್ಳಿ, ಸೋಯಾಬಿನ್,ಸೂರ್ಯಕಾಂತಿ,ಮೆಕ್ಕೆಜೋಳ ಬಿತ್ತನೆ ಶುರುವಾಗಿದೆ. ಅರಳಿಕಟ್ಟಿ ಸುತ್ತ-ಮುತ್ತ ರೈತರು ಈರುಳ್ಳಿ ಬಿತ್ತನೆ ಮಾಡುತ್ತಿದ್ದಾರೆ. ಈ ಬಾರಿ ಉತ್ತಮ ಬರತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ರೈತನಲ್ಲಿ ಮಂದಹಾಸ ಮೂಡಿಸಿದೆ.

ಇನ್ನು ಬಾಗಲಕೋಟೆ ಜಿಲ್ಲೆ ಮುಧೋಳ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಭರದಿಂದ ಬಿತ್ತನೆ ಕಾರ್ಯ ಸಾಗಿದ್ದು, ಮಳೆಯಿಂದ ಹದಗೊಂಡ ಭೂಮಿ ತಾಯಿಗೆ ಉಡಿ ಅನ್ನದಾತರು ಉಡಿ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.