Bagalkot

ಮೊಸಳೆ ಸ್ಥಳಾಂತರಿಸಲು ಆಗ್ರಹಿಸಿದರೂ ಡೋಂಟ್’ಕೇರ್

Share

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮ ಹಳ್ಳದ ನೀರಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಒಂದು ತಿಂಗಳಿನಿಂದ ಮೊಸಳೆ ಸ್ಥಳಾಂತರಕ್ಕೆ ಮನವಿ ಮಾಡಿದರೂ, ಕ್ಯಾರೆ ಎನ್ನದ ಅರಣ್ಯ ಇಲಾಖೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮ ಹಳ್ಳದ ನೀರಿನಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಮೊಸಳೆ ಓಡಾಟದ ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಹಳ್ಳದ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಓಡಾಟ ಕಂಡು ಜನರಲ್ಲಿ ಆತಂಕ ಮೂಡಿಸಿದೆ. ಬಿಸಿಲಿನಿಂದ ಹಳ್ಳದ ನೀರು ಕಡಿಮೆ ಆದ ಹಿನ್ನೆಲೆ ಮೊಸಳೆ ಹಳ್ಳದ ಪಕ್ಕ ಬಂದಿದ್ದು, ಜನರು ಗಾಬರಿಯಾಗಿದ್ದಾರೆ. ಮೊಸಳೆಯನ್ನು ನದಿಗೆ ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಒಂದು ತಿಂಗಳಿನಿಂದ ಮನವಿಯನ್ನು ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಮೊಸಳೆ ಇದೆ ಎಚ್ಚರಿಕೆ ಎಂದು ಪಂಚಾಯತಿ ಸಿಬ್ಬಂದಿ ಫಲಕ ಅಳವಡಿಸಿ ಕೈತೊಳೆದುಕೊಂಡಿದ್ದಾರೆ

Tags:

error: Content is protected !!