budget

ರಾಜ್ಯ ಬಜೆಟ್ ಕರ್ನಾಟಕವನ್ನ ಸಾಲದ ಕೂಪಕ್ಕೆ ತಳ್ಳಿದೆ : ಬಸವರಾಜ ಬೊಮ್ಮಯಿ

Share

ಸಿಎಂ ಸಿದ್ದರಾಮಯ್ಯ ಅವರ ಈ ಬಜೆಟ್ ಕರ್ನಾಟಕವನ್ನ ಸಾಲದ ಕೂಪಕ್ಕೆ ತಳ್ಳಿದೆ ಎಂದು ,ಸಂಸದ ಬಸವರಾಜ ಬೊಮ್ಮಯಿ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು. ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ದೊಡ್ಡ ಕೊಡುಗೆ ಈ ಬಜೆಟ್ ಕೊಟ್ಟಿದೆ. ಇದು ಜನ ವಿರೋಧಿ, ಅಭಿವೃದ್ಧಿ ವಿರೋಧಿ ಬಜೆಟ್ ಆಗಿದೆ ಎಂದರು.
ಬಜೆಟ್ ನಲ್ಲಿ ಕೇವಲ ಬೆಂಗಳೂರು-ಮೈಸೂರು ಸೀಮಿತವಾದಂತಾಗಿದೆ. ಅತ್ಯಂತ ನಿರಾಶದಾಯಕ ಬಜೆಟ್. ಹಣಕಾಸಿನ ಸ್ಥಿತಿ ಸುಧಾರಿಸುವಂತ ಯಾವುದೇ ಕ್ರಮ ಇಲ್ಲಾ ಎಂದರು. ಕಳೆದ ವರ್ಷ ಕೊಟ್ಟ ಬಜೆಟ್ ನ ಹಣ ಖರ್ಚು ಮಾಡಿಲ್ಲ. 5 ಸಾವಿರ ಕೋಟಿ ಕಲ್ಯಾಣ ಕರ್ನಾಟಕಕ್ಕೆ ಕೊಡಬೇಕು ಅಂತ ಕೇಳಿದ್ವಿ ನಯಾ ಪೈಸಾ ಕೊಡಲಿಲ್ಲ.ಕಳೆದ ವರ್ಷ ರೆವೆನ್ಯು ಕಲೆಕ್ಟ್ ಮಾಡಬೇಕು, ಅದನ್ನು ಮಾಡಿಲ್ಲ .
10 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ, ವೆಚ್ಚ ಕೂಡ ಕಡಿಮೆ ಮಾಡಿದ್ದಾರೆ ಎಂದರು. ಹೆಚ್ಚಿನ ಸಾಲ ತೆಗೆದುಕೊಳ್ಳೋದೇ ಇದರ ಸಾಧನೆ ಎಂದು ಲೇವಡಿ ಮಾಡಿದರು.

ಮೈಸೂರು ಹಾಗೂ ಬೆಂಗಳೂರಿಗೆ ಹೆಚ್ಚಿನ ಒತ್ತು ವಿಚಾರ

ಉತ್ತರ ಕರ್ನಾಟಕಕ್ಕೆ ಪ್ರಾದೇಶಿಕ ಸಮತೋಲನ ಮಾಡೋಕೆ ಯಾವುದು ಕ್ರಮ ಆಗಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟು, ಖರ್ಚು ಮಾಡಿಲ್ಲ. ಎಸ್ ಸಿ ಪಿ, ಟಿ ಎಸ್ ಪಿ ಗೂ ಸಹ ಖರ್ಚು ಮಾಡಲ್ಲ. ಕಿತ್ತೂರ ಕರ್ನಾಟಕಕ್ಕೆ ಶೂನ್ಯ ಕೊಡುಗೆ ಎಂದರು.

Tags:

error: Content is protected !!