Kagawad

ಕಾಗವಾಡ : ಕಾಲುಬಾಯಿ ರೋಗ ಲಸಿಕಾ ಅಭಿಯಾನ ಶಾಸಕ ರಾಜು ಕಾಗೆ ಚಾಲನೆ

Share

ರಾಜ್ಯ ಸರ್ಕಾರದ ಪಶುಪಾಲನಾ ಮತ್ತು ಪಶು ಸಂಗೋಪನಾ ಸೇವಾ ಇಲಾಖೆ ಇವರ ವತಿಯಿಂದ ಕಾಗವಾಡ ತಾಲೂಕಿನ ಸುಮಾರು ೫೦ ಸಾವಿರ ಧನಕರುಗಳಿಗೆ ಕಾಲುಬಯಿ ರೋಗ ಲಸಿಕಾ ಅಭಿಯಾನ ಪ್ರಾರಂಭಿಸಿದ್ದು ಇದರ ಸದುಪಯೋಗ ರೈತ ಬಾಂಧವರು ಪಡೆದುಕೊಳ್ಳಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ಕರೆ ನೀಡಿದರು.

ಶುಕ್ರವಾರಂದು ಕಾಗವಾಡ ಶಾಸಕ ರಾಜು ಕಾಗೆ ಇವರ ಉಗಾರದ ಪ್ರಧಾನ ಕಛೇರಿಯಲ್ಲಿ ಲಸಿಕಾ ಅಭಿಯಾನಕ್ಕೆ ಹಸುಗೆ ಪೊಜೆ ಸಲ್ಲಿಸಿ ಶಾಸಕರು ಚಾಲನೆ ನೀಡಿದರು.
ಕಾಗವಾಡ ತಾಲೂಕಾ ಪಶು ವೈದ್ಯಾಧಿಕಾರಿಗಳಾದ ಡಿ. ಜೆ. ಕಾಂಬಳೆ, ಶಾಸಕರಿಗೆ ಮಾಹಿತಿ ನೀಡುವಾಗ ಸೋಮವಾರ ದಿ . ೨೧ ರಿಂದ ಅಭೀಯಾನ ಪ್ರಾರಂಭಿಸಿದ್ದು ನವೆಹಂಬರ ೨೦ ರವೆರೆಗೆ ಕಾಗವಾಢ ತಾಲೂಕಿನ ೫೦ ಸಾವಿರ ಜಾನುವಾರಗಳಿಗೆ ಲಸಿಕೆ ಹಾಕುವವರಿದ್ದು ೪೦ ಜನ ಸಿಬ್ಬಂದಿಗಳು ರೈತರ ಮನೆಗೆ ಹೋಗಿ ಎಲ್ಲ ಜಾನುವಾರಗಳಿಗೆ ಹಾಗೂ ಶ್ವಾನಗೆ ರೇಬಿಜ್ ಲಸಿಕೆ ಹಾಕಲಿದ್ದಾರೆ. ಈ ಅಭಿಯಾನಕ್ಕೆ ಎಲ್ಲ ರೈತರು ಸಹಕರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಥಣಿ ತಾಲೂಕಾ ಪಶು ವೈದ್ಯಾಧಿಕಾರಿಗಳಾದ ಎಮ್.ಎಸ್. ಹುಂಡಕೇರಿ, ಐನಾಪೂರದ ವೈದ್ಯಾಧಿಕಾರಿ ಡಾ// ಅಭೀನಂದನ ಪಾಟೀಲ, ಎಸ್. ಕೆ. ಪೂಜಾರಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಶಾಸಕ ಶ್ರೀರಾಮುಲು ರಾಜು ಕಾಗೆ ಇವರು ರೈತರಲ್ಲಿ ಜಾಗ್ಥತಿ ಮೂಡಿಸಲು ಹಸುಗೆ ಪೊಜೆ ಸಲ್ಲಿಸಿ ಜಾಹೀರಾತ ಪತ್ರಿಕಗಳು ಬಿಡುಗಡೆ ಮಾಡಿದರು.

ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!