ಬೆಳಗಾವಿಯ ನೂತನ ನ್ಯಾಯಾಲಯಗಳ ಸಂಕೀರ್ಣಕ್ಕೆ ನಿರ್ಮಿಸಲಾದ ಸ್ವಾಗತ ಕಮಾನು ಮತ್ತು ಪ್ರವೇಶದ್ವಾರವನ್ನು ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ಅವರು ಲೋಕಾರ್ಪಣೆಗೊಳಿಸಿದರು.


ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಕನ್ನಡ ಸಾಹಿತ್ಯ ಭವನದ ಪಕ್ಕದಲ್ಲಿ ಬೆಳಗಾವಿಯ ನ್ಯಾಯಾಲಯಗಳ ಸಂಕೀರ್ಣಕ್ಕೆ ನೂತನವಾಗಿ ನಿರ್ಮಿಸಲಾದ ಸ್ವಾಗತ ಕಮಾನು ಮತ್ತು ಪ್ರವೇಶದ್ವಾರವನ್ನು ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ಅವರು ಲೋಕಾರ್ಪಣೆಗೊಳಿಸಿದರು. ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ನ್ಯಾಯಾಲಯಕ್ಕೆ ಬರುವ ಜನರಿಗೆ ಇದು ಅನುಕೂಲಕರವಾಗಿದೆ. ಈ ಮೊದಲೂ ಪ್ರಾದೇಶಿಕ ಆಯುಕ್ತರ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿನ ಒಂದೇ ಒಂದು ಪ್ರವೇಶದ್ವಾರದ ಮೂಲಕ ನ್ಯಾಯಾಲಯಕ್ಕೆ ಬರಬೇಕಾಗುತ್ತಿತ್ತು. ಆದರೇ, ಈಗ ಹೊಸ ಪ್ರವೇಶದ್ವಾರವನ್ನು ಜನರ ಅನಾನೂಕೂಲತೆಯನ್ನು ದೂರಗೊಳಿಸಿದೆ.

ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಬಾರ್ ಅಸೋಸಿಯೇಷನ್’ನ ಸದಸ್ಯರು ಇನ್ನುಳಿದವರು ಭಾಗಿಯಾಗಿದ್ಧರು.
