ಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ ಮಾರುತಿ ಜಯಂತಿ ಸಮಾರೋಪದ ಹಿನ್ನೆಲೆ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು.

ಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ ಮಾರುತಿ ಜಯಂತಿ ಸಮಾರೋಪದ ಹಿನ್ನೆಲೆ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು. ಹನುಮಾನ ಜಯಂತಿಯ ದಿನದಿಂದ ಶನಿವಾರದ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶನಿವಾರ ಸಂಜೆ ಮಹಾಪ್ರಸಾದದೊಂದಿಗೆ ಪ್ರಸ್ತುತ ವರ್ಷದ ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮ ಸಮಾರೋಪಗೊಂಡಿತು.
ಶಹಾಪುರದ ಕಚೇರಿ ಗಲ್ಲಿಯಲ್ಲಿ 1991 ರಲ್ಲಿ ಶ್ರೀ ಮಾರುತಿ ಮಂದಿರ ಸ್ಥಾಪನೆಯಾಯಿತು. ಕಾಲಾನಂತರ ಭಕ್ತರ ಸಹಯೋಗದಲ್ಲಿ ಬೃಹತ್ ಮಂದಿರ ನಿರ್ಮಾಣವಾಗಿದ್ದು, ಪ್ರತಿ ಹನುಮಾನ ಜಯಂತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಮಹಾಪ್ರಸಾದವನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷ ಸುಮಾರು 5 ಸಾವಿರ ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸುತ್ತಾರೆಂದು ಪ್ರವೀಣ್ ಚತುರ್ ಇನ್ ನ್ಯೂಸ್’ಗೆ ತಿಳಿಸಿದರು.
ಮಹಾಪ್ರಸಾದವನ್ನು ಯಶಸ್ವಿಗೊಳಿಸಲು ಶಿವ ಸಮ್ರಾಟ್ ಯುವಕ ಮಂಡಳ ಸೇರಿದಂತೆ ಸ್ಥಳೀಯ ಭಕ್ತರು ಶ್ರಮವಹಿಸಿದರು. ಮಂದಿರದ ಆವರಣದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಹನುಮ ನಾಮ ಸ್ಮರಣೆಯೊಂದಿಗೆ ಇಡೀ ಶಹಾಪುರ ಭಾಗದಲ್ಲಿ ಆಧ್ಯಾತ್ಮಿಕ ಕಳೆ ಮನೆ ಮಾಡಿತ್ತು, ಭಕ್ತರು ಭಕ್ತಿಭಾವದಿಂದ ಮಾರುತಿಯ ದರ್ಶನ ಪಡೆದು ಪುನೀತರಾದರು.
