ಬೆಳಗಾವಿ ಪಾಂಗೂಳ ಗಲ್ಲಿಯ ಶ್ರೀ ಅಶ್ವಥಾಮಾ ಮಂದಿರದಲ್ಲಿನ ಹನುಮಾನ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೆಳಗಾವಿಯ ಬೆಳಗಾವಿ ಪಾಂಗೂಳ ಗಲ್ಲಿಯ ಶ್ರೀ ಅಶ್ವಥಾಮಾ ಮಂದಿರದಲ್ಲಿನ ಹನುಮಾನ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಆಂಜನೇಯನ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾ ಆರತಿ ನೆರವೇರಿಸಲಾಯಿತು. ನಂತರ ಸುಮಂಗಲಿಯರಿಂದ ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ಹನುಮಾನ ಜನ್ಮೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗಿಯಾಗಿ ಮಾರುತಿರಾಯನ ದರ್ಶನ ಪಡೆದುಕೊಂಡರು.
