ಬೆಳಗಾವಿಯ ಹೊಸೂರು ಬಸವನ ಗಲ್ಲಿಯ ಪ್ರತಿಷ್ಠಿತ ನಾಗರಿಕರು ಹಾಗೂ ನಿವೃತ್ತ ಪೊಲೀಸ್ ಹವಾಲ್ದಾರ್ ಆಗಿದ್ದ ಅಶೋಕ ರಾಮಚಂದ್ರ ಶಿಂದೆ (೭೧) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ ಹಾಗೂ ಸಹೋದರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಹಳೆಯ ಬೆಳಗಾವಿಯ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

