ಭಾರತದ ಮೇಲೆ ಪರಕೀಯರು ನಿರಂತರವಾಗಿ ಸಾವಿರಕ್ಕಿಂತ ಹೆಚ್ಚು ವರ್ಷಗಳ ಕಾಲ ದಾಳಿ ಮಾಡಿದರೂ,ನೂರು ಕೋಟಿಗಿಂತ ಹೆಚ್ಚು ಜನರಲ್ಲಿ ನಮ್ಮ ಸಂಸ್ಕ್ರತಿ-ಪರಂಪರೆಯ ಆಚರಣೆ ಉಳಿದಿರುವುದು ಮಹಿಳೆಯರಿಂದ.ಮಹಿಳೆಯರು ತೊಟ್ಟ ಬಿಂದಿಗೆಯಿಂದ,ಬಳೆಯಿಂದ ನಮ್ಮ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎಂದು ಬೆಂಗಳೂರಿನ ಖ್ಯಾತ ಭಾಷಣಗಾರತಿ,ಲೇಖಕಿ ಹಾರಿಕಾ ಮಂಜುನಾಥ ಹೇಳಿದರು.


ಅವರು ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಪಾಟೀಲ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ತನ್ನ ಮೇಲೆ ಹಾಗೂ ತನ್ನ ಕೋಟೆಯ ಮೇಲೆ ಪರಕೀಯರ ದಾಳಿ ಆಗುವ ಸಂಧರ್ಬದಲ್ಲಿ ಕೈಯಲ್ಲಿ ಖಡ್ಗ ಹಿಡಿದು ಕೆಚ್ಚೆದೆಯಿಂದ ಹೋರಾಡಿ ತಮ್ಮ ಸಂಸ್ಥಾನವನ್ನು ಉಳಿಸಿಕೊಂಡ ಕಿತ್ತೂರಿನ ರಾಣಿ ಚೆನ್ನಮ್ಮ, ಒಣಕೆ ಓವಬ್ಬ,ತಾರಾಬಾಯಿ,ಕೆಳದಿ ಚೆನ್ಮಮ್ಮ,ಬೆಳವಡಿ ಮಲ್ಲಮ್ಮ ಸೇರಿದಂತೆ ವಿವಿಧ ಮಹಿಳೆಯರು ನಮ್ಮ ಭಾರತದ ಪರಂಪರೆ.

ಭಾರತೀಯ ಪರಂಪರೆ ವಿದೇಶಗಳ ಪರಂಪರೆಗೆ ಹೊಂದಾಣಿ ಮಾಡಿಕೊಂಡಾಗ ಭಾರತೀಯ ಪರಂಪರೆಯು ಅತ್ಯಂತ ಶ್ರೇಷ್ಠವಾದದ್ದು.ಸದ್ಯ
ಭಾರತೀಯ ಹೆಣ್ಣುಮಕ್ಕಳು ಮದುವೆಗೆ,ಅಡುಗೆ ಮನೆಗೆ,ಮನೆ ಬಾಗಿಲಿಗೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಪ್ರವೃತ್ತಿಯಾಗಿರುವದು ನಮ್ಮ ಪರಂಪರೆ.ಸಮಾಜವನ್ನು ಮುಂದುವರಿಸುವ ಗೃಹಿಣಿ,ಆರ್ಥಿಕ ಬೆಂಬಲ ನೋಡಿಕೊಳ್ಳುವ ಮಹಿಳೆ ಹೀಗೆ ವೇದಗಳಲ್ಲಿ ಮಹಿಳೆಯರನ್ನು ವಿವಿಧ ರೀತಿಯಾಗಿ ಹಾಡಿಹೊಗಳಾಗಿದೆ.
ಮಹಿಳೆಯರನ್ನು ತಾಯಿಯ ಸ್ವರೂಪದಲ್ಲಿ ನೋಡುವ ಪರಂಪರೆ ನಮ್ಮದು ಎಂದರು.ಬೆಳಗಾವಿ ಜಿಲ್ಲೆಯಲ್ಲಿ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಪಾಟೀಲ ಪ್ರಥಮ ಮಹಾವಿದ್ಯಾಲ ಎಂಬುದು ನಿಜಕ್ಕೂ ಹೆಮ್ಮೆಯ ವಿಷಯ.ಇವತ್ತು ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅರಿಶಿನ ಕುಂಕುಮ ಕೊಟ್ಟು ಸ್ವಾಗತಿಸಿಕೊಂಡು ಹಾಗೂ ಎಲ್ಲ ವಿದ್ಯಾರ್ಥಿನಿಯರು ಸೀರೆಯನ್ನು ಉಟ್ಟುಕೊಂಡು ಬಂದಿರುವುದು ನಮ್ಮ ಭಾರತೀಯ ಪರಂಪರೆಯ ಸಂಕೇತ ಎಂದು ಹಾರಿಕಾ ಮಂಜುನಾಥ ಸಂತಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ತೃಪ್ತಿ ಎಸ ಕುಲಕರ್ಣಿ,ಭಾಗ್ಯಶ್ರೀ ಕುಲಕರ್ಣಿ, ಶೋಭಾ ಮಾಂಜ್ರೆಕರ,ನಿಲಮ ಅಡಕೆ,ಕೀರ್ತಿ ಕುಲಕರ್ಣಿ,ಸ್ವಾತಿ ದೇಶಪಾಂಡೆ, ರೇಖಾ ಕುಲಕರ್ಣಿ,ಗಾಯತ್ರಿ ಪಡಲಿ,ಗೌರಿ ಮಾಂಜ್ರೇಕರ, ಪ್ರಾಚಾರ್ಯರಾದ ಡಾ! ಎಸ್.ಸಿ.ಜಕಾತೆ,ಶೃತಿ ಪಾಟೀಲ,ಪೂಜಾ ಬಾನಕರೆ,ತೃಪ್ತಿ ಎಸ್ ,ಉಮಾ ಪತ್ತಾರ,ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ,ರೇಖಾ ಕುಲಕರ್ಣಿ,ಗಾಯತ್ರಿ ಪಟ್ಲಿ,ಪ್ರಿಯಾಂಕಾ ಹಿರೇಮಠ,ರೋಹಿಣಿ ಕುಂಬಾರ,ಕಸ್ತೂರಿ ನಿಡೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
