Chikkodi

ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಅದು ಹಿಂದೂ ಸ್ವಭಾವ:ಮೋಹನ ಭಾಗವತ

Share

ಸಂಘಟಿತರಾಗಿ ಸಮಾಜವನ್ನು ಅಭಿವೃದ್ಧಿಪಡಿಸುವುದು ಮತ್ತು ವೈವಿಧ್ಯತೆಯನ್ನು ಸ್ವೀಕರಿಸುವುದು ಮತ್ತು ಎಲ್ಲರನ್ನೂ ನಮ್ಮ ಹಾದಿಯಲ್ಲಿ ಕರೆದೊಯ್ಯುವುದು ಮತ್ತು ಎಲ್ಲರ ನಂಬಿಕೆಯನ್ನು ಗೌರವಿಸುವುದು ನಿಜವಾದ ಧರ್ಮವಾಗಿದೆ. ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಅದು ಹಿಂದೂ ಸ್ವಭಾವ. ಇದಕ್ಕಾಗಿ ಯುವ ಪೀಳಿಗೆ ಸ್ವಹಿತಾಸಕ್ತಿಯ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮೋಹನ್ ಭಾಗವತ ಅವರು ಗೋ ತುಲಾಭಾರ ಉದ್ಘಾಟನೆ ಕಾಡದೇವರ ಮಠದ ಆವರಣದಲ್ಲಿ ಕಚೇರಿ‌ ಉದ್ಘಾಟಿಸಿ ಮಾತನಾಡಿದರುವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಯುವಕರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು ಅಹಂಕಾರದಿಂದಾಗಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಹಿಂದೂ ಧರ್ಮ ಎಲ್ಲರ ನಂಬಿಕೆಯನ್ನು ಗೌರವಿಸುವ ಮತ್ತು ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುವ ಧರ್ಮ. “ಜಗತ್ತು ನನ್ನ ಮನೆ” ಎಂಬ ಮನೋಭಾವದಿಂದ ನಾವು ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಧಾರ್ಮಿಕ ಅರಿವು ಮತ್ತು ಸಾಮಾಜಿಕ ಅರಿವಿನ ಮೂಲಕ ಜಗತ್ತು ಹಿಂದೂ ಧರ್ಮವನ್ನು ವಿಶ್ವ ಗುರು ಎಂದು ಪರಿಗಣಿಸುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು ಎಂದರು.

ಶ್ರೀಶೈಲ್ ಜಗದ್ಗುರು ಡಾ. ಚನ್ನಸಿಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ತೀರ್ಥಕ್ಷೇತ್ರ ಯಡೂರಿನ ಇತಿಹಾಸದಲ್ಲಿ ಇದು ಮರೆಯಲಾಗದ ಕ್ಷಣವಾಗಿದೆ ಮತ್ತು ಇಂದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ರೂಪದಲ್ಲಿ, ಜ್ಞಾನದ ಕುಂಭಾಭಿಷೇಕ ನಡೆದಿದೆ.ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಘವು ಜನರಿಗೆ ಸಲ್ಲಿಸಿದ ಸೇವೆ ಶ್ಲಾಘನೀಯ. ಯುವ ಪೀಳಿಗೆ ಡಾ. ಮೋಹನ್ ಭಾಗವತ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು ಮತ್ತು ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವುದು ತಮ್ಮ ವೃತ್ತಿ ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ಸದ್ಗುಣಶೀಲ ನಾಗರಿಕರಾಗಬೇಕು. ಧಾರ್ಮಿಕ ಅರಿವು ಮತ್ತು ಧರ್ಮದ ರಕ್ಷಣೆ ಅಗತ್ಯ. ಧರ್ಮ ಮತ್ತು ದೇಶವನ್ನು ರಕ್ಷಿಸಿದರೆ, ನಿಜವಾದ ಸಂತೋಷ ಮತ್ತು ತೃಪ್ತಿಯನ್ನು ಸಾಧಿಸಲಾಗುತ್ತದೆ. ಯುವ ಪೀಳಿಗೆ ಧಾರ್ಮಿಕ ಅರಿವು ಮತ್ತು ದೇಶದ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು.

ಈ ಸಂದರ್ಭದಲ್ಲಿ, ಹುಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ನೂಲ್‌ನ ಸರ್ಗೀಶ್ವರ ಮಠದ ಗುರು ಸಿದ್ಧೇಶ್ವರ ಸ್ಚಾಮೀಜಿ,ಶ್ರೀಕಾಂತ್ ಉಮರಾಣಿ ಶಿವಲಿಂಗಯ್ಯ ಅಲ್ಲಯ್ಯನವರ್ಮಠ ಸೇರಿದಂತೆ ‌ಆರ್.ಎಸ್. ಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು..

Tags:

error: Content is protected !!