ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಇನ್ಕಮ್ ಟ್ಯಾಕ್ಸ್ ಆಫೀಸರ್ ಭರತ್ ಕುಮಾರ್ ಹೆಗ್ಗಡೆ ಆರು ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಆಗಿದ್ದ ಭರತ್ಕುಮಾರ ವಿಶ್ವಜಿತ್ ನಾಯಕ್ ಎಂಬುವವರಿಂದ ಆರು ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. 2019 ರಲ್ಲಿ 8 ಟಿಪ್ಪರ್ ಖರೀದಿಸಿದ್ದ ವಿಶ್ವಜಿತ್ ನಾಯಕೆ ಟಿಪ್ಪರ್ ಖರೀದಿಸಿದ್ದರ ಇನ್ಸುಟ್ ಟ್ಯಾಕ್ಸ್ ಕ್ರೆಡಿಟ್ 60 ಲಕ್ಷ ಬಂದಿತ್ತು. ಅದ್ರಲ್ಲಿ 34 ಲಕ್ಷ ಇನ್ಸುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿದ್ದರು. ವಿಶ್ವಜಿತ್ ನಾಯಕರು ಪಡೆದುಕೊಂಡ ಇನ್ಸುಟ್ ಟ್ಯಾಕ್ಸ್ ಕಾನೂನು ಬಾಹಿರ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ರು. ಅಂಕೋಲಾ ಮೂಲದ ವಿಶ್ವಜಿತ್ ನಾಯಕರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು. ಇನ್ಸುಟ್ ಟ್ಯಾಕ್ಸ್ ಕ್ರೆಡಿಟ್ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾಗಿ ಕೇಸ್ ದಾಖಲಾಗಿತ್ತು. ನಾಲ್ಕು ಬಾರಿ ವಿಚಾರಣೆ ಕರೆದಿದ್ದರು, ಇಂದು ಐದನೇ ಬಾರಿಗೆ ವಿಚಾರಣೆ ಇತ್ತು.
ವಿಚಾರಣೆಗೆ ಬರುವಾಗ ಹಣ ತೆಗೆದುಕೊಂಡು ಬನ್ನಿ, ಕೇಸ್ ಕ್ಲೋಸ್ ಮಾಡುವುದಾಗಿ ಹೇಳಿದ್ದರು. 6 ಲಕ್ಷ ನೀಡುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್. ಲೋಕಾ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್, ಇನ್ಸೆಕ್ಟರ್ ರಾಜು ನೇತೃತ್ವದ ತಂಡದಿಂದ ದಾಳಿ ಮಾಡಿದರು.
