ಹುಕ್ಕೇರಿ ನಗರದ ಶ್ರೀ ಲಕ್ಷೀ ದೇವಿ ಜಾತ್ರೆಯ ಮೊದಲ ದಿನ ರಾತ್ರಿ 8 ಘಂಟೆಯಿಂದ ಜಗಮಗಿಸುವ ವಿದ್ಯುತ್ ಅಲಂಕಾರದಲ್ಲಿ ಭಂಡಾರದ ಹೋನ್ನಾಟ ಮೂಲಕ ಹಕ್ಕು ದಾರರ ಮನೆಗೆ ತೇರಳಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ತುರಬಂದಿ ಯಲ್ಲಿ ರಥದಲ್ಲಿ ಆಸಿನಳಾದಳು.


ಗ್ರಾಮ ದೇವತೆ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಆಗಮಿಸಿ ದೇವಿಯ ಹೋನ್ನಾಟದಲ್ಲಿ ಭಾಗಿಯಾಗಿ ಭಂಡಾರದ ಹೋಳೆ ಹರಿಸಿದರು, ಯುವಕರು ಇಂಗಳೋಬಾನನ್ನು ಹೋತ್ತಿಕೊಂಡು ಓಡುವ ದೃಶ್ಯ ರೋಚಕವಾಗಿತ್ತು.
ಲಕ್ಷ್ಮಿ ದೇವಿ ಸಂಚರಿಸುವ ಮಾರ್ಗವನ್ನು ಸ್ಥಳಿಯ ಪುರಸಭೆ ಅಧಿಕಾರಿಗಳು ರಸ್ತೆ ರೀಪೇರಿ, ವಿದ್ಯುತ್ ವ್ಯವಸ್ಥೆ, ಗಟಾರ ಸ್ವಚ್ಚತೆ ಮತ್ತು ಮೂಲ ಭೂತ ಸೌಲಭ್ಯಗಳನ್ನು ಪೋರೈಸಿ ಯಾವದೇ ರೀತಿ ತೊಂದರೆಯಾಗದಂತೆ ಮುನ್ನೇಚ್ಚರಿಕಾ ಕ್ರಮಗಳನ್ನು ಕೈಕೊಂಡಿದ್ದರು.
ಬೆಳಗಿನ ಜಾವ ತುರಬಂದಿಯಲ್ಲಿ ಲಕ್ಷ್ಮಿ ದೇವಿಯು ರಥದಲ್ಲಿ ಆಸಿನರಾದಳು.
ಇಡಿ ರಾತ್ರಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರಾದ ರಾಜೇಶ ಕುಲಕರ್ಣಿ, ವಿನೋದ ಮುತಾಲಿಕ, ರಾಜು ಕೋಟಬಾಗಿ, ರವೀಂದ್ರ ನಾಯಿಕ, ಶಿವರುದ್ರಪ್ಪಾ ಶೇಟ್ಟಿ, ಚಂದ್ರಶೇಖರ ಮಲಕಾಯಿ, ಚಿದಾನಂದ ಬಸ್ತವಾಡೆ, ಸಿದಗೌಡಾ ಪಾಟೀಲ, ರುದ್ರಗೌಡಾ ಪಾಟೀಲ, ಕಲ್ಲೊಪಂತ ಕುಲಕರ್ಣಿ, ಗೀರಿಶ ಕುಲಕರ್ಣಿ, ಬಸಗೌಡಾ ಪಾಟೀಲ, ಶಿವಾನಂದ ಮುದಕನ್ನವರ, ಭೀಮಾನಂದ ಮುದಕನ್ನವರ ರವರ ಮನೆಗಳಿಗೆ ತೇರಳಿದಾಗ ಬಾಗಿನ ಅರ್ಪಿಸಿ ದೇವಿ ಆಶಿರ್ವಾದ ಪಡೆದುಕೊಂಡರು.
