ಸೋಲಿನ ಭಯದಿಂದ ಬಿಜೆಪಿ ಕಾಂಗ್ರೆಸ್ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ ಚುನಾವಣೆ ಮಾಡಿಲ್ಲಾ ಎಂದು ಅಮ್ ಆದ್ಮ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೊಲ್ಲಾಪುರ ಆರೋಪಿಸಿದರು. ಅವರಿಂದು ವಿಜಯಪುರ ನಗತದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿ ಚುನಾವಣೆ ನಡೆಸದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸೋಲಿನ ಭಯದಿಂದ ಚುನಾವಣೆ ನಡೆಸಿಲ್ಲ. ಈಗ ಹೈಕೋರ್ಟ್ ಆದೇಶದ ಬಳಿಕ ಸರ್ಕಾರ ಕೆಟಗರಿ ಸಿದ್ಧಪಡಿಸಿ ಜೂನ್ ಅಂತ್ಯದಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಮ ಆದ್ಮಿ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
