Dharwad

ಧಾರವಾಡದ ನರೇಂದ್ರದಲ್ಲಿ ರಸ್ತೆ ಬದಿ ಜೋಗುತ್ತಿದ್ದವರ ಮೇಲೆ ಹೆಜ್ಜೇನು ದಾಳಿ, 15 ಜನರಿಗೆ ಗಾಯ.

Share

ರಸ್ತೆ ಬದಿ ಹೋಗುತ್ತಿದ್ದ ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ, 15 ಜನ ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಕಳೆದ ಗುರುವಾರ ಸಂಜೆ ನಡೆದಿದೆ.

ವೈ- ರಸ್ತೆ ಮೇಲೆ ಹೊರಟಿದ್ದವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಇದರಿಂದ ಬೈಕ್ ಮೇಲೆ ಹೊರಟಿದ್ದ ಸವಾರರು ಮತ್ತು ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. 15 ಜನರ ಪೈಕಿ 8 ಜನ ಚಿಕಿತ್ಸೆ ಪಡೆದು‌ ವಾಪಸ್ ಆಗಿದ್ದು, ಹೆಚ್ಚಿಗೆ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಮುಂದುವರೆದಿದೆ.

Tags:

error: Content is protected !!