ಕಾಂಗ್ರೆಸ್ ಸರ್ಕಾರವನ್ನು ‘ಪರ್ ಸ್ಕ್ವೇರ್ ಫೀಟ್ ಭ್ರಷ್ಟಾಚಾರದ ಸರ್ಕಾರ’ ಎಂದು ಬಾಗಲಕೋಟೆಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಜನರಲ್ಲಿದ್ದ ನಿರೀಕ್ಷೆಗಳು ಈಗ ಹುಸಿಯಾಗಿವೆ ಎಂದು ವಿಜಯೇಂದ್ರ ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಅಹಿಂದ ಜಪ ಮಾಡುತ್ತಲೇ ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ಮರೆತಿದ್ದಾರೆ. ವಿಶೇಷವಾಗಿ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸದೆ ಈ ಸರ್ಕಾರ ದುರ್ಲಕ್ಷ್ಯ ವಹಿಸಿದೆ. ಬೆಂಗಳೂರಿನಲ್ಲಿ ಈ ಸರ್ಕಾರವನ್ನು ‘ಪರ್ ಸ್ಕ್ವೇರ್ ಫೀಟ್ ಭ್ರಷ್ಟಾಚಾರದ ಸರ್ಕಾರ’ ಎಂದು ಕರೆಯಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಎರಡು ತಿಂಗಳ ಹಣ ಬಾಕಿ ಇದ್ದರೂ ಸಿಎಂ ಮೌನ ವಹಿಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಕಿಡಿಕಾರಿದರು.
ಪ್ಯಾರಾ 2:ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಶಾಸಕರಿಗೆ ಅನುದಾನ ನೀಡದೆ ವಿದೇಶಿ ಪ್ರವಾಸದ ಭಾಗ್ಯ ಕಲ್ಪಿಸಲಾಗುತ್ತಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. ಅಬಕಾರಿ ತೆರಿಗೆ ಸಂಗ್ರಹಕ್ಕಾಗಿ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ರಾಜ್ಯವನ್ನು ‘ಕುಡುಕರ ನಾಡು’ ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ 100ಕ್ಕೆ 110ರಷ್ಟು ನಿಜ ಎಂದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿರುವುದರಿಂದ ಯಾರು ಸಿಎಂ ಆದರೂ ಅಭಿವೃದ್ಧಿ ಸಾಧ್ಯವಿಲ್ಲ. ನಮಗೆ ಅಧಿಕಾರದ ಆತುರವಿಲ್ಲ, ಇವರೇ ಇನ್ನುಳಿದ ಅವಧಿಯನ್ನು ಪೂರೈಸಲಿ ಎಂದು ಸವಾಲು ಹಾಕಿದರು.
