Chikkodi

ಅತ್ತೆ ಸಾಯಲಿ:ದೇವರ ಹುಂಡಿಯಲ್ಲಿದ್ದ ಚೀಟಿ

Share

ದೇವರೇ ನನ್ನ ಕಷ್ಟ ದೂರ ಮಾಡು. ನಮ್ಮ ಅತ್ತೆ ಸಾಯಲಿ ಎಂದು ದೇವರಿಗೆ ಹರಕೆ ಹೊತ್ತು ದೇವರ ಹುಂಡಿಗೆ ಪತ್ರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ರಾಯಬಾಗ ತಾಲೂಕಿನ ಖಣದಾಳ ಗ್ರಾಮ ದೇವತೆ ಹುಲಿಕಾಂತೇಶ್ವರ ದೇವರಿಗೆ ಅಪರಿಚಿತ ಮಹಿಳೆ/ಪುರುಷ ಹರಕೆ ಹೊತ್ತು ಹುಂಡಿಗೆ ಚೀಟಿ ಹಾಕಿದ್ದಾರೆ. 100 ರೂ. ಹಾಗೂ 10 ರೂ. ಮುಖಬೆಲೆಯ ನೋಟಿನ ಒಳಗಡೆ ಬಿಳಿಹಾಳೆಯ ಮೇಲೆ ಬರವಣಿಗೆ ಹುಂಡಿ ಎಣಿಸುವ ವೇಳೆ ಶನಿವಾರ ಪತ್ತೆಯಾಗಿದೆ. ಈ ರೀತಿ ಅತ್ತೆ ಕಾಟದಿಂದ ಬೇಸತ್ತ ಸೊಸೆ ಹಾಕಿದ್ದಾಳಾ ಅಥವಾ ಅಳಿಯ ಹಾಕಿದ್ದಾನಾ ಗೊತ್ತಿಲ್ಲ. ಇದೀಗ ಗ್ರಾಮದಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!