BELAGAVI

ಬೆಳಗಾವಿ ನಗರದೊಳಗೆ ‘ಭಾರಿ’ ವಾಹನಗಳನ್ನ ನಿರ್ಬಂಧಿಸಿ: ರೈತ ಸಂಘ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಪ್ರತಿಭಟನೆ

Share

ಬೆಳಗಾವಿ ನಗರದ ಒಳಗಡೆ ಬರುವು ಭಾರಿ ಗಾತ್ರದ ವಾಹನಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆಗ ಮುಖ್ಯವಾಗಿ ಶಾಲಾ ಮಕ್ಕಳು ಶಾಲೆಗೆ ಹೋಗುವ ಸಮಯದಲಿ. ಶಾಲೆ ಬಿಡುವ ಸಮಯದಲ್ಲಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕೆ ಹೋಗುವಾಗ ಬರುವಾಗ ಭಾರಿ ಗಾತ್ರದ ವಾಹನಗಳು ನಗರದ ಒಳಗೆ ಬರುವುದರಿಂದ ಸಾರ್ವಜನಿಕರು ತಮ್ಮ ಜೀವವನ್ನು ಅಂಗೈಯಲ್ಲಿಟ್ಟು ಸಮಸ್ಯೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಸ್ವತಂತ್ರವಾಗಿನಿರ್ಭಿತವಾಗಿ ಓಡಾಡುವ ಹಕ್ಕುವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಆದ್ದರಿಂದ ಶಾಲಾ ಮಕ್ಕಳ ಶಾಲೆ ಆರಂಭವಾಗುವ ಸಮಯ ಹಾಗೂ ಬಿಡುವ ಸಮಯ ಅನುಗುಣವಾಗಿ ತಾವು ಭಾರಿ ಗಾತ್ರದ ವಾಹನಗಳನ್ನು ನಗರದ ಒಳಗಡೆ ಬರದಂತೆ ನಿರ್ಬಂಧ ಹಾಕಬೇಕು ಎಂದು ಆಗ್ರಹಿಸಿದರು.
ಗಂಗಾಧರ್ ದೊಡಮನಿ, ಎ.ಎ.ನಾಯಕವಾಡಿ, ಪ್ರದೀಪ್ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!