ಬೆಳಗಾವಿ ನಗರದ ಬಬನ್ ಭೋಬೆ ಮಿತ್ರ ಮಂಡಳಿಯ ವತಿಯಿಂದ ಸಾಮಾಜಿಕ ಬದ್ಧತೆ ಮೆರೆಯುವ ನಿಟ್ಟಿನಲ್ಲಿ ಸ್ನೇಹಾಲಯ ಮಂದಬುದ್ಧಿ ಮಕ್ಕಳ ಶಾಲೆ ಹಾಗೂ ಸಮೃದ್ಧಿ ಫೌಂಡೇಶನ್ನ ವಿಶೇಷ ಮಕ್ಕಳಿಗೆ ಜೀವನೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.

ಬೆಳಗಾವಿಯ ಸಮಾದೇವಿ ಗಲ್ಲಿಯ ಗುರು ಮೆಡಿಕಲ್ಸ್ನ ಆರ್ಥಿಕ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಮಾನವೀಯ ಕಾರ್ಯಕ್ರಮದಲ್ಲಿ, ಖಾಸ್ಬಾಗ್ನ ಸ್ನೇಹಾಲಯ ಮತ್ತು ಕಂಗ್ರಾಳಿಯ ಸಮೃದ್ಧಿ ಫೌಂಡೇಶನ್ ಸಂಸ್ಥೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ವಿಶೇಷ ಚೇತನ ಮಕ್ಕಳಲ್ಲಿ ಸಂತಸ ತುಂಬಲಾಯಿತು. ಈ ಸಂದರ್ಭದಲ್ಲಿ ಸ್ನೇಹಾಲಯದ ಅಧ್ಯಕ್ಷ ಉದಯ್ ಕಲಘಟಕರ್, ಗುರು ಮೆಡಿಕಲ್ಸ್ನ ಸಂಚಾಲಕ ಗುರು ಸುಂಟಣಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಸಮಾಜದ ಪ್ರತಿಷ್ಠಿತ ಸಂಸ್ಥೆಗಳು ಇಂತಹ ವಿಶೇಷ ಮಕ್ಕಳ ನೆರವಿಗೆ ಧಾವಿಸಬೇಕೆಂದು ಕರೆ ನೀಡಿದರು; ಮಂಡಳಿಯ ಈ ಸಾರ್ಥಕ ಸೇವಾ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
