ಅಕ್ರಮ ಮದ್ಯಕ್ಕೆ ಸಂಬಂಧಿಸಿದಂತೆ ೯ ತಿಂಗಳಲ್ಲಿ ಒಟ್ಟು ೧೨೯೪ ಪ್ರಕರಣ ದಾಖಲಿಸಿದ ಬೆಳಗಾವಿ ಅಬಕಾರಿ ಇಲಾಖೆಯೂ ೨ ಕೋಟಿ ೨೮ ಲಕ್ಷದ ಮದ್ಯ ವಶಕ್ಕೆ ಪಡೆದಿದೆ. ರಾಯಬಾಗದಲ್ಲಿ 5 ವರ್ಷದ ಮಗುವಿಗೆ ಮದ್ಯ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಅಬಕಾರಿ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಕಳೆದ ಏಪ್ರೀಲ್’ನಿಂದ ಡಿಸೆಂಬರ್ ವರೆಗೆ ತೀವ್ರ ಕಾರ್ಯಾಚರಣೆಯನ್ನು ನಡೆಸಿ ಒಟ್ಟು 1294 ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 2 ಕೋಟಿ 28 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 783 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕ್ರಮಕೈಗೊಳ್ಳಲಾಗುವುದು ಎಂದರು. ಕಳ್ಳಭಟ್ಟಿಗೆ ಸಂಬಂಧಿಸಿದಂತೆ ಬೀಟ್ ಪೊಲೀಸರು ನಿಗಾವಹಿಸುತ್ತಿದ್ದಾರೆ. ಢಾಭಾಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಅಬಕಾರಿ ಕೈಪಿಡಿಯಂತೆ ಪ್ರತಿ ತಿಂಗಳು ಗ್ರಾಮಸಭೆಗಳನ್ನು ನಡೆಸಲಾಗುತ್ತಿದೆ. ಚುನಾವಣೆ ವೇಳೆ ಆರಂಭಸಿದ್ದ ಸಹಾಯವಾಣಿಯನ್ನು ಸಕ್ರಿಯಗೊಳಿಸಲಾಗುವುದು ಎಂದರು.
ಇನ್ನು ನಮ್ಮಲ್ಲಿಯೂ ಸಿಬ್ಬಂದಿ ಕೊರತೆಯಿದೆ. ಶೇ.30 ರಷ್ಟು ಪೇದೆಗಳಿದ್ದಾರೆ. ಅವರುಗಳನ್ನೇ ಬಳಸಿ ಕಾರ್ಯನಿರ್ವಹಿಸಲಾಗುತ್ತಿದೆ. ಹೊಸ ವರ್ಷದಾಚರಣೆಯ ವೇಳೆ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕೆಂದು ಲೈಸೆನ್ಸಧಾರಕ ಮಾರಾಟಗಾರರಿಗೆ ಯಾವುದೇ ಟಾರ್ಗೆಟ್ ನೀಡಿಲ್ಲ. ಇನ್ನು ಕುಡಿದು ವಾಹನ ಚಲಾವಣೆ ತಪ್ಪು ಎಂದರು. ಇನ್ನು ರಾಯಬಾಗನಲ್ಲಿ ಐದು ವರ್ಷದ ಮಗುವಿಗೆ ಮದ್ಯ ಸೇವನೆಗೆ ಬಾರ್’ನಲ್ಲಿ ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಗದೀಶ್ ಎನ್.ಕೆ., ನಿಂಗನಗೌಡ ಪಾಟೀಲ್, ವಿಜಯ ಹಿರೇಮಠ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
