Vijaypura

ದೇವರಂತಹ ಮನುಷ್ಯ ‌ಸಿದ್ದರಾಮಣ್ಣ, ಆದರೆ ಈ ಕಾಂಗ್ರೆಸ್ ನವರೊಟ್ಟಿಗೆ ಸೇರಿ ಸತ್ಯಾನಾಶವಾಗಿದ್ದಾನೆ: ಸಂಸದ ರಮೇಶ ಜಿಗಜಿಣಗಿ.

Share

ದೇವರಂತಹ ಮನುಷ್ಯ ‌ಸಿದ್ದರಾಮಣ್ಣ, ಆದರೆ ಈ ಕಾಂಗ್ರೆಸ್ ನವರೊಟ್ಟಿಗೆ ಸೇರಿ ಸತ್ಯಾನಾಶ ವಾಗಿದ್ದಾನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಆದರೆ ಡೆಬಿಟ್ ಅಕೌಂಟ್ ನಲ್ಲಿ ಹಣವೇ ಇಲ್ಲಾ ಎಂದು ವ್ಯಂಗ್ಯವಾಡಿದರು. ರಾಜ್ಯದ ತುಂಬಾ ಒಂದೇ ಒಂದು ಅಭಿವೃದ್ಧಿ ಕಾರ್ಯವಿಲ್ಲಾ, ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಸಂಬಳವಿಲ್ಲಾ, ನಾವು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರ ಪರ ಎಂದು ಸರ್ಕಾರದವರು ಹೇಳುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಇಲ್ಲಾ, ಸರ್ಕಾರದ ಗ್ಯಾರಂಟಿ ಇಂದ ನಮಗೆ ಮೋಸ ಮಾಡಿದ್ದೀರಿ ಎಂದು ಮಹಿಳೆಯರೇ ಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ವಪಟೇಲ ಸಾಹೇಬರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಂತ್ರಿಗಳಾಗಿ ನಾವು ಕೆಲಸ ಮಾಡಿದ್ದೇವೆ. ಎರಡು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲಾ, ಇವರದ್ದು ಕೇಂದ್ರ ಸರ್ಕಾರದೊಂದಿಗೆ ಒಳ್ಳೆಯ ಸಂಬಂಧ ಕೂಡಾ ಇಟ್ಟುಕೊಂಡಿಲ್ಲಾ, ಇವರ ಆಡಳಿತದಿಂದ ನನಗೆ ತುಂಬಾ ನೋವಾಗುತ್ತದೆ ಎಂದರು. ನಮ್ಮ‌ ಸರ್ಕಾರ ಮಾಡಿರುವ ಕೆಲಸಕ್ಕೆ ಇವರು ಭೂಮಿಪೂಜೆ ಮಾಡುವದು ಚಾಲನೆ ಕೊಡುವದು ಮಾಡುತ್ತಾರೆ, ಕಳೆದ ಎರಡು ವರ್ಷದಿಂದ ಒಂದಾದರೂ ಅಭಿವೃದ್ಧಿ ಕೆಲಸ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಹಳ್ಳಿಗಳಲ್ಲಿ ಒಂದೇ ಒಂದು ರಸ್ತೆ ಸರಿಯಾಗಿ ಇಲ್ಲ, ಈ ಸರ್ಕಾರಕ್ಕೆ ಏನೇ ಬೈದರೂ ತಲೆ ಕೆಡಿಸಿಕೊಳ್ಳುತ್ತಿಲ್ಲಾ, ಸಿಎಂ ಅವರ ಕಂಟ್ರೋಲ್ ನಲ್ಲಿ ಶಾಸಕರು, ಸಚಿವರು ಇರಬೇಕು, ಆದರೆ ಸಿಎಂ ಮಾಡುವ ಕೆಲಸ ಸುರ್ಜೇವಾಲಾ ಅವರು ಬಂದು ಶಾಸಕ, ಸಚಿವರೊಟ್ಟಿಗೆ ಮಾತನಾಡುವಂತ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ ಎಂದರು. ಸರ್ಕಾರ ನಡೆಸುವದು ದೊಡ್ಡ ಕೆಲಸವಲ್ಲಾ, ದೇಶಕ್ಕೆ ಮಾದರಿಯಾದ ಸರ್ಕಾರ ನಡೆಸಬೇಕು, ದೇವರೇ ಇವರಿಗೆ ಕಾಪಾಡಬೇಕು, ಹಿಂದೆ ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ, ಕೃಷ್ಣಾ ಅವರು ಸಿಎಂ ಆಗಿದ್ದಾಗ ಮಾದರಿಯಾದ ಕೆಲಸ ಮಾಡಿದ್ದರು. ಆದರೆ ಈ ಸರ್ಕಾರದ ಕೆಲಸದಿಂದ ನನಗೆ ನೋವಾಗಿದೆ ಎಂದರು. ಮಾದ್ಯಮಗೋಷ್ಠಿಯಲ್ಲಿ ಮಾದ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

Tags:

error: Content is protected !!