ನಟ ಪುನೀತ್ ರಾಜ್ಕುಮಾರ್ ಅವರಂತೆ ಜಯಮೃಂತ್ಯುಜಯ ಶ್ರೀ ಕರ್ನಾಟಕ ಪ್ರತಿಯೊಂದು ಪಂಚಮಸಾಲಿಗರ ಮನದಲ್ಲಿದ್ದಾರೆ. ಅವರಿಗೆ ದೊಡ್ಡ ಸ್ಥಾನ ಬೇಕಿಲ್ಲ. ಟ್ರಷ್ಟ್ ಸಹ ತನ್ನ ಇತಿಮಿತಿಗಳಲ್ಲಿ ತನ್ನ ಅಧಿಕಾರ ಚಲಾಯಿಸಲಿ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಈಗ ಮತ್ತೊಂದು ಸ್ವಾಮೀಜಿ ಕರೆ ತರುತ್ತಿರಿ ಅಂದ್ರೆ,
ಅವರ ಎಕ್ಸಪೈರಿ ಡೆಟ್ ಎಷ್ಟು..? ಅವರು ಮಠದಿಂದ ಎಷ್ಟು ದಿನದಲ್ಲಿ ಹೊರಗೆ ಹೋಗುತ್ತಾರೆ..?
ಮಠಕ್ಕೆ ವಿಜಯಾನಂದ ಕಾಶೆಪ್ಪನವರ ಕೊಡುಗೆ ಏನು..?
ಸುಮ್ಮನೆ ಏನೋನೋ ಮಾತನಾಡಬೇಡಿ, ಈ ಬಗ್ಗೆ ಸಿಎಂ ಮೇಲೆ ಆರೋಪ ಮಾಡಲ್ಲ.
ಕಾಶೆಪ್ಪನವರ ವರ್ತನೆ ಬಗ್ಗೆ ಅವರ ಪಕ್ಷದ ಹೈಕಮಾಂಡ್ ಗುರುತಿಸಬೇಕು. ಕರ್ನಾಟಕ ಪ್ರಬಲ ಕೋಮಿನ ಜೊತೆಗೆ ಈ ರೀತಿ ಮಾಡುತ್ತಿವುದಕ್ಕೆ ಡಿಸಿಎಂ ಕಾಶೆಪ್ಪನವರ ಕರೆದು ಬುದ್ದಿವಾದ ಹೇಳಬೇಕು ಎಂದರು.