Dharwad

ಮೊದಲ ಬಹುಮಾನ ಮಹಿಂದ್ರಾ ಥಾರ್ ಜೀಪ್

Share

ಆ ವ್ಯಕ್ತಿ ಭಾರತೀಯ ಸೈನ್ಯದಲ್ಲಿ ‌ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಲೂ ಗಡಿಯ ಸೇವೆಯ ಜತೆಗೆ ಎಲ್ಲರಂತೆ ಇವರು ಕೂಡಾ ಸುಮ್ಮನಿರಬಹುದಿತ್ತು. ಆದರೆ ಈ ವ್ಯಕ್ತಿ ಇವರೆಲ್ಲರಿಗಿಂತ ಭಿನ್ನವಾಗಿ‌ ನಿಲ್ಲುತ್ತಾರೆ. ಕ್ರೀಡಾ ಜಗತ್ತಿನಲ್ಲಿ ನಮ್ಮ ದೇಶದ ಹಾಗೂ ನಾಡಿನ ಧ್ವಜ ಒಲಂಪಿಕ್ ಮಟ್ಟದಲ್ಲಿ ಹೆಚ್ಚು ಜನರು ಹಾರಿಸಬೇಕು ಎನ್ನುವುದುರ ಜತೆಗೆ, ಸದೃಢ ಯುವ ಸಮಾಜ ನಿರ್ಮಾಣಕ್ಕೆ ಇವರು ಟೊಂಕ ಕಟ್ಟಿ ನಿಂತಿದ್ದು, ಈಗ ದೇಶವೆ ಹಳಿಯಾಳ ತಾಲ್ಲೂಕಿನ ಕಡೆ ತಿರುಗಿ ನೋಡುವ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ. ಅದೇನೂ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ವಿವರ..

GFX START….

ಉ.ಕನ್ನಡದ ಹಳಿಯಾಳದಲ್ಲಿ ಅಂತಾರಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಜ್ಜಾದ ಸೈನಿಕ ರಾಜು ಪೆಜೋಳ್ಳಿ ಆ್ಯಂಡ್ ಟೀಮ್

ಮೊದಲ ಬಹುಮಾನ ಮಹಿಂದ್ರಾ ಥಾರ್ ಸೇರಿ 4 ಕೋಟಿ ವೆಚ್ಚದಲ್ಲಿ ಆಕರ್ಷಕ ಬಹುಮಾನಗಳು ಘೋಷಣೆ

ಧಾರವಾಡದ ಅಳ್ನಾವಾರ ಆ್ಯಂಡ್ ಉ.ಕನ್ನಡದ ಹಳಿಯಾಳ ಭಾಗದ ಕ್ರೀಡಾಪಟುಗಳಿಗೆ ಭರವಸೆ ಬೆಳಕಾದ ಸೈನಿಕ ರಾಜು ಪೆಜೋಳ್ಳಿ

ಒಂದು ಕಡೆ ಮಾಜಿ ಪೈಲ್ವಾನರಿಗೆ ಸನ್ಮಾನ್ ….ಮತ್ತೊಂದು ಕಡೆ 2024-25ರಲ್ಲಿ ರಾಷ್ಟ್ರ ಮಟ್ಟದಲ್ಲಿ ಕುಸ್ತಿಯಲ್ಲಿ ಸಾಧನೆ ಮಾಡಿದ ಯುವಕ ಯುವತಿರಿಗೆ ಶಾಲು ಹೊದಿಸಿ ಗೌರವಿಸುತ್ತಿರುವ ನಿಸ್ವಾರ್ಥಿ ಹಾಗೂ ಸೈನಿಕ ರಾಜು ಪೆಜೋಳ್ಳಿ… ಈ ಎಲ್ಲ ಕ್ಷಣಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾದ ಪುರ ಭವನ ಸಾಕ್ಷಿಯಾಗಿತ್ತು. ಪುರ ಭವನ ಮುಂಭಾಗದಲ್ಲಿನ ಶಿವಾಜಿ ಮೂರ್ತಿಗೆ ಹೀಗೆ ಮಾಲಾರ್ಪಣೆ ಮಾಡುತ್ತಿರುವ ಇವರ ಪೂರ್ಣ ಹೆಸರು ರಾಜು ಮಾರತಿ ಪೆಜೋಳ್ಳಿ, ಮೂಲತಃ ಧಾರವಾಡದ ಅಳ್ನಾವಾರ ಮೂಲದರಾಗಿದ್ದು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ಹಿಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರ ಜತೆಗೆ ಯುವ ಕ್ರೀಡಾಪಟ್ಟುಗಳ ಸಹಾಯಕ್ಕೆ ನಿಂತಿದ್ದಾರೆ.‌ ಅಂದಹಾಗೆ ಧಾರವಾಡದ ಅಳ್ನಾವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎರಡು ಜಿಲ್ಲೆಯ ಗಡಿ ತಾಲ್ಲೂಕುಗಳ ಕ್ರೀಡಾಪಟುಗಳಿಗೆ ಈಗ ಇವರು ಬೆನ್ನೆಲುಬಾಗಿ ನಿಂತಿದ್ದಾರೆ.

ನಮ್ಮ ದೇಶದ ಪಾರಂಪರಿಕ ಕ್ರೀಡೇ ಎಂದೇ ಖ್ಯಾತಿ ಹೊಂದಿರುವ ಕುಸ್ತಿ ಪಟ್ಟಗಳು ಸೇರಿ ಹಾಕಿ ಇನ್ನಿತರ ಎಲ್ಲ ಕ್ರೀಡಾಪಟುಗಳು ಸಹಾಹಸ್ತ ಅಷ್ಟೇ ಅಲ್ಲ, ಅವರ ನೋವು ಸಂಕಷ್ಟಗಳನ್ನು ದೂರು ಮಾಡುತ್ತಾ ಯುವ ಕ್ರೀಡಾಪಟ್ಟಗಳ ಸಾಧನೆಗೆ ಸದಾ ಸಿದ್ದಾರಾಗಿ ರಾಜು ಅವರು ನಿಂತಿದ್ದಾರೆ. ಸದೃಢ ಯುವ ಸಮಾಜ ಕನಸು ಹೊಂದಿರುವ ಇವರು, ಈ ಹಿಂದೆ ಧಾರವಾಡದ ಅಳ್ನಾವಾರದಲ್ಲಿ ಯಾವುದೇ ಸರ್ಕಾರದ ಸಹಾಯ ಪಡೆಯದೇ ಕುಸ್ತಿ ಪಂದ್ಯಾವಳಿಯನ್ನು ಅಯೋಜನೆ ಮಾಡಿ ಸರ್ಕಾರಕ್ಕೆ ಮಾದರಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸರ್ಕಾರ ರಾಜ್ಯದಲ್ಲಿ ಕುಸ್ತಿ ಪಂದ್ಯಗಳನ್ನು ಆಡಿಸುವುದನ್ನೇ ಮರೆತ್ತಿರುವ ವಿಷಯ ಅರಿತು, ತಾವೇ ತಮ್ಮ‌ ಸ್ವತಃ ಹಣದಲ್ಲಿ ಕುಸ್ತಿ ಉಳಿವಿಗಾಗಿ ಶ್ರಮಿಸುವ ಮೂಲಕ‌ ಇತರರಿಗೆ ಮಾದರಿಯಾಗಿದ್ದಾರೆ. ಜತೆಗೆ ಸೈನಿಕ ರಾಜು ಕನಸು-ಆಸೆ ಒಂದೆಯಾಗಿದ್ದು, ನಮ್ಮ ದೇಶ ಸೇರಿ‌ ನಾಡಿನ‌ ಬಾವುಟವನ್ನು ಒಲಂಪಿಕ್ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ‌ ಎತ್ತಿ ಹಿಡಿಯುವ ಕೈಗಳು ಸಂಖ್ಯೆ ಹೆಚ್ಚಾಗಬೇಕು ಅನ್ನುವುದು ಇವರ ಬಹು ದೊಡ್ಡ ಕನಸಾಗಿದೆ. ಅಳ್ನಾವಾರ ಸೇರಿ ಹಳಿಯಾಳ ತಾಲ್ಲೂಕಿನ ಕ್ರೀಡಾಪಟುಗಳು ಇವರ ಬಗ್ಗೆ ಹೇಳಿದ್ದು ಹೀಗೆ…

ಇನ್ನೂ ಸೈನಿಕರಾದರೂ ಕೂಡಾ ರಾಜು ಎಂ ಪಿಯವರು ಸದೃಢ ಯುವ ಸಮಾಜ ಕಟ್ಟಲು ಮುಂದಾಗಿದ್ದು, ಈಗ ದೇಶವೇ ಹಳಿಯಾಳ ಕಡೆ ತಿರುಗಿ ನೋಡು ಮಹತ್ತರ ಘೋಷಣೆಯನ್ನು ಮಾಡಿದ್ದಾರೆ. ಬರುವ 2026ನೇ ಜನೆವರಿ ತಿಂಗಳಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆಯ ಘೋಷಣೆ ಮಾಡಿದ್ದಾರೆ. ಮಾಜಿ ಹಾಲಿ ಪೈಲ್ವಾನರ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಹಳಿಯಾಳ ಪುರ ಭಯವನದಲ್ಲಿ ಹಾಲಿ ಮಾಜಿ ಪೈಲ್ವಾನರೊಂದಿಗೆ ಚರ್ಚೆ ಮಾಡಿ ನಿರ್ಧಾರ ಕೈಗೊಂಡಿದ್ದು, ದೇಶದ ಇತಿಹಾಸದಲ್ಲಿಯೇ ಮೊದಲನೇ ಬಹುಮಾನ‌ ಮಹಿಂದ್ರಾ ಥಾರ ಬಹುಮಾನದೊಂದಿಗೆ ಹತ್ತು ಬಿಲೆಟ್ ಬೈಕ್ ಹಾಗೂ ಹತ್ತು ಸಪ್ಲೆಂಡರ್ ಬೈಕ್ ಸೇರಿ ಹಲವು ಆಕರ್ಷಕ ಬಹುಮಾನಗಳನ್ನು ಈ ಪಂದ್ಯವಾಳಿಯಲ್ಲಿ ಗೆದ್ದವರಿಗೆ ನೀಡುಲು ನಿರ್ಧಾರ ಮಾಡಿದ್ದಾರೆ. ಇದು ಮಣ್ಣಿನ‌ ಅಖಾಡ ಕುಸ್ತಿಯಾಗಿದ್ದು,

ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜು ಪೆಜೋಳ್ಳಿಯವರು ಬಹುಮಾನಗಳಿಗಾಗಿಯೇ ಖರ್ಚು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶಿಯ ಕ್ರೀಡೆ ನಶಿಸಿ ಹೋಗುತ್ತಿದೆ. ಆಳು ಸರ್ಕಾರಗಳು ಈ ಕ್ರೀಡೆ ಆಯೋಜನೆ ಮಾಡೋವುದನ್ನು ಸಂಪೂರ್ಣವಾಗಿ ನಿಲ್ಲಿಸಿವೆ.‌ ಮಾಜಿ ಪೈಲ್ವಾನರಗಳ ಸಂಕಷ್ಟ ಕೇಳಲು ಸರ್ಕಾರಕ್ಕೆ ಸಮಯ ಇಲ್ಲದಂತಾಗಿದೆ. ಈ ಎಲ್ಲ ಸಂಗತಿಗಳನ್ನು ಅರಿತು ಈಗ ಈ ಕ್ರೀಡೆ ಉಳಿವಿಗಾಗಿ ಶ್ರಮಿಸುತ್ತಿದ್ದೇನೆ.‌ 2026ರ ಜನೆವರಿಯಲ್ಲಿ ಹಳಿಯಾಳದಲ್ಲಿ ನಡೆಯುವ ಅಂತರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸುಮಾರು ಎರಡು ಲಕ್ಷ ಜನ ಸೇರು ನಿರೀಕ್ಷೆ ಇದೆ.‌ ದೇಶದ ವಿವಿಧ ರಾಜ್ಯ ಸೇರಿ ಹೊರ ದೇಶದ ಕುಸ್ತಿಪಟ್ಟುಗಳು, ಈ ಬಾರಿ ಭಾಗವಹಿಸುತ್ತಾರೆ ಎಂದು ರಾಜು ಪೆಜೊಳ್ಳಿ ಮಾಹಿತಿ ನೀಡಿದ್ದಾರೆ. ಜತೆಗೆ ಹಳಿಯಾದ ಮಾಜಿ ಪೈಲ್ವಾನರು ರಾಜು ಅವರ ಉತ್ಸಾಹಕ್ಕೆ ದೇವರ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದಾರೆ.

ದೇಶೀಯ ಪಾರಂಪರಿಕ ಕ್ರೀಡೆಯಾಗಿರುವ ಕುಸ್ತಿ ಉಳಿಸುವುದರ ಜತೆಗೆ ಅಳ್ನಾವಾರ ಹಾಗೂ ಹಳಿಯಾಳ ತಾಲ್ಲೂಕಿನ ಕ್ರೀಡಾಪಟುಗಳ ಸಾಧನೆಗೆ ರಾಜು ಪೆಜೋಳ್ಳಿಯವರು ಟೊಂಕಕಟ್ಟಿ ನಿಂತಿದ್ದು, 2026 ಜನೆವರಿ ತಿಂಗಳಲ್ಲಿ ಅಂತಾರಷ್ಟ್ರ ಮಟ್ಟದ ಮಣ್ಣಿನ ಅಖಾಡ ಕುಸ್ತಿಗೆ ಈಗ ಸಿದ್ಧವಾಗುತ್ತಿದ್ದಾರೆ. ಭಾರತಾಂಬೆಯ ಸೇವೆಯೊಂದಿಗೆ ದೇಶದ ಒಳಗೆಯೂ ಸದೃಢ ಯುವ ಸಮಾಜ ಸಂಕಲ್ಪದೊಂದಿಗೆ ಮಹತ್ತರ ಹೆಜ್ಜೆ ಇಟ್ಟಿರುವುದು ಇಲ್ಲಿನ ಕ್ರೀಡಾಪಟ್ಟುಗಳಿಗೆ ಹೊಸ ಶಕ್ತಿ ನೀಡಿರುವುದು ಸುಳ್ಳಲ್ಲ.

ಮಂಜುನಾಥ ಇನ್ ನ್ಯೂಸ್ ಧಾರವಾಡ…..

Tags:

error: Content is protected !!