Uncategorized

ಉಗಾರ ಬುದ್ರುಕ ಗ್ರಾಮದ ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಪರಿಸರ ದಿನ ಆಚರಣೆ

Share

ಕಾಗವಾಡ: ನಿಸರ್ಗದ ಸಮತೋಲನೆ ತಪ್ಪಿದ್ದು ಈ ವರ್ಷ ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಸಿಯಸ ವರಿಗೆ ತಾಪಮಾನ ಏರಿಕೆಯಾಗಿದೆ ಇದರಿಂದ ಪರಿಸರದ ಹಾನಿಯಾಗುತ್ತಿದ್ದು ಈ ಮುಂದೆ ತಾಪಮಾನ ಹೆಚ್ಚಿಸಿದ್ರೆ ಅನಾಹುತ ವಾಗುವುದು ಈ ಕಾರಣ ಪ್ರತಿಯೊಬ್ಬರು ಸಸಿಗಳನ್ನು ನಟ್ಟುವುದು ಅನಿವಾರ್ಯವಾಗಿದೆ ಎಂದು ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿತಲಗೌಡ ಪಾಟೀಲ ಹೇಳಿದರು.

ಶುಕ್ರವಾರ ರಂದು ವಿಶ್ವ ಪರಿಸರ ದಿನ ನಿಮಿತ್ಯ ಪದ್ಮಾವತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಸಸಿಗಳನ್ನು ನಟು ಸಸಿಗಳ ಬಗ್ಗೆ ವಿಶೇಷವಾದ ಮಾಹಿತಿ ಹಾಗೂ ಅವುಗಳ ಬಗ್ಗೆ ಕಾಳಜಿ ನಿರ್ಮಿಸಲು ವಿಶ್ವ ಪರಿಸರ ದಿನಾಚರಣೆ ಆಚರಿಸಿ ಮಾರ್ಗದರ್ಶನ ನೀಡಿದರು.

ಶೀತಲಗೌಡ ಪಾಟೀಲ ಮುಂದುವರೆದು ಮಾತನಾಡುವಾಗ ಚೈನಾ ದೇಶದಲ್ಲಿ ಮರಗಳನ್ನು ನಾಸಿ ಮಾಡುವ ಜನರ ಮೇಲೆ ಕ್ರಮ ಕೈಗೊಳ್ಳೋದು ಕಾಯ್ದೆ ಜಾರಿಗೆ ತಂದಿದ್ದು. ಅಲ್ಲದೆ ಆ ದೇಶದಲ್ಲಿಯೇ ಎಲ್ಲಾ ಸ್ವಾಮಿಲ, ಕಟ್ಟಿಗೆ ಗಿರಣಿಗಳು ನಿಷೇಧಿಸಿದ್ದಾರೆ ಇದರಿಂದ ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಹಸಿರು ಹಚ್ಚು ಪರಿಸರ ನಿರ್ಮಿಸಿದ್ದಾರೆ. ಅದೇ ರೀತಿ ಭಾರತ ದೇಶದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ಸಂಸ್ಥೆಯ ಮುಖ್ಯೋಧ್ಯಾಪಕ ರಾವಸಾಹೇಬ ಹೂನಮಾನೆ ಇವರು ಎಲ್ಲ ವಿದ್ಯಾರ್ಥಿಗಳಿಗೆ ಕಾಡು ಉಳಿಸಿ ನಾಡು ಉಳಿಸಿರಿ, ಹಸಿರೇ ಉಸಿರು ಇಂತಹ ಘೋಷಣೆಗಳು ಹೇಳುವ ಮುಖಾಂತರ ಮಕ್ಕಳಲ್ಲಿ ವಿಶ್ವ ಪರಿಸರ ದಿನಾಚರಣೆ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಭರತೇಶ ಖಂಡೆರಾಜುರಿ, ದೀಪಕ ಪಾಟೀಲ, ಮಹಾವೀರ ವಸವಾಡೆ, ಪ್ರಶಾಂತ ಕುಸನಹಳೆ, ಪ್ರವೀಣ ಪಾಟೀಲ, ಪದ್ಮಕುಮಾರ ಆಳಪ್ಪನವರ ಸೇರಿದಂತೆ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿವಕುಮಾರ ಬನ್ನೂರೆ
ಔನ ನ್ಯೂಸ ಕಾಗವಾಡ

Tags:

error: Content is protected !!