Banglore

ವಿನಯ್ ಕುಲಕರ್ಣಿಗೆ ಮತ್ತೇ ಎದುರಾದ ಸಂಕಷ್ಟ… ವಾರದೊಳಗೆ ಕೋರ್ಟಿಗೆ ಶರಣಾಗಲು ಆದೇಶ!!

Share

ಕೋರ್ಟ್ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ. ಕೋರ್ಟ್ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿದ್ದೇನೆ. ನಿನ್ನೆಯ ಘಟನೆ ವಿಚಾರ ತಿಳಿಸಿದ್ದೇನೆ. ಇದರ ಹಿಂದೆ ಹಲವಾರು ಮಂದಿ ಕೈವಾಡ ಇದೆ. ಇದೇನು ಸಮಸ್ಯೆ ಇಲ್ಲ. ಕೋರ್ಟ್ ನಲ್ಲಿ ಸಾಕ್ಷಿ ಬೇಕು. ಸಾಕ್ಷಿ ಮೇಲೆ ಕೋರ್ಟ್ ತೀರ್ಮಾನ ಮಾಡುತ್ತದೆ ಎಂದರು.

ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತನಾಡಿದ ಅವರು, ಇನ್ನೂ ಕೆಲ ದಿನ ಕಾಲಾವಕಾಶವಿದೆ. ನೋಡಬೇಕು. ಯಾವ ರೀತಿಯ ಕೈವಾಡ ಇಲ್ಲ. ಒಂದು ಸಿಂಗಲ್ ಕಾಲ್ ಕೂಡ ನಾನು ಯಾರಿಗೂ ಮಾಡಿಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ದೇವರು ಒಬ್ಬನಿದ್ದಾನೆ. ವಿನಯ್ ಕುಲಕರ್ಣಿ ಅವರನ್ನ ಮತ್ತೆ ಜೈಲಿಗೆ ಕಳಿಸಬೇಕು. ಸಣ್ಣ ಹುಡುಗರಿಗೂ ಕೇಳಿದರೆ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವರೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tags:

error: Content is protected !!