Chikkodi

ಯಾದವರ ಮಕ್ಕಳಿಗೆ ಯುಪಿಎಸ್‌ ತರಬೇತಿ:ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ

Share

ಚಿಕ್ಕೋಡಿ: ಹಣಬರ ಯಾದವ ಸಮಾಜದ ಮಕ್ಕಳು ಉನ್ನತ ಹುದ್ದೆಗಳಾದ ಯುಪಿಎಸ್ ಪರೀಕ್ಷೆಗಳಿಗೆ ಬೆಂಗಳೂರಿನಲ್ಲಿ ಶೀಘ್ರದಲ್ಲೆ ತರಬೇತಿ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ ಹೇಳಿದರು.

ಚಿಕ್ಕೋಡಿ ಲೋಕೊಪಯೋಗಿ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘದ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು. ಉನ್ನತ ಹುದ್ದೆಗಳ ತರಬೇತಿ ಪಡೆಯುವರಿಗೆ ವಸತಿ ಸೌಲಭ್ಯ ನೀಡಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಬೆಳಗಾವಿ ನೆಲ ಐತಿಹಾಸಿಕವಾಗಿದೆ ಅದಕ್ಕಾಗಿ ಚಿಕ್ಕೋಡಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಮಾಡಲಾಗಿದೆ. ಗೊಲ್ಲ ಜಾತಿ ಎಲ್ಲಿವರಿಗೆ ಇರುತ್ತೆ ಅಲ್ಲಿವರಿಗೆ
ಕೇಂದ್ರ-ರಾಜ್ಯ ಸರಕಾರದಿಂದ ನಿಗಮ ಮಂಡಳಿಗೆ 100 ಕೋಟಿ ಅನುದಾನ ಬರುತ್ತದೆ ಎಂದು ಹೇಳಿದರು. ಚಿಕ್ಕೋಡಿಯಲ್ಲಿ ನಡೆದ ಕಾರ್ಯಕ್ರಮ ಐತಿಹಾಸಿಕವಾಗಿದೆ. ಜಾತಿಗಣತಿಯಲ್ಲಿ ಮುಖ್ಯ ಜಾತಿಯನ್ನು ಗೊಲ್ಲ ಎಂದು ಬರೆಯಿಸಬೇಕು. ಇದರ ಜೊತೆಗೆ ಉಪ ಜಾತಿ ನಮೂದು ಮಾಡಬೇಕು. ನಮ್ಮ ಸಮಾಜ ಬಾಂಧವರು ಮುಖ್ಯವಾಹಿನಿಗೆ ಬರಬೇಕಾದರೆ ಎಲ್ಲರೂ ಸಂಘಟಿತವಾದ ಹೋರಾಟ ಮಾಡಬೇಕಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಕಾರ್ಮಿಕ ಇಲಾಖೆ ಆಯುಕ್ತ ಸಂಜಯ ಶಿಂಧಿಹಟ್ಟಿ ಮಾತನಾಡಿದರು. ಭರಮ ತೊಳ್ಳಿ, ಜಯಗೌಡ ಪಾಟೀಲ, ಎಸ್.ಬಿ. ಪಾಟೀಲ, ಸಚಿನ ಖೋತ, ಬೆಳಗಾವಿ ಜಿಲ್ಲಾ ಹಣಬರ ಯಾದವ ಸಂಘದ ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಡಾ.ವೆಂಕಟೇಶ ಶಿಂಧಿಹಟ್ಟಿ, ರಾಜೇಶ ಪಾಟೀಲ, ರಾಜು ಹಮ್ಮನ್ನವರ, ವಸಂತ ಖೋತ, ಎಸ್.ಬಿ. ಮದಿಹಳ್ಳಿ ಉಪಸ್ಥಿತರಿದ್ದರು. ಶಿವಲಿಂಗ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ರಾಮು ಮದಿಹಳ್ಳಿ ನಿರೂಪಿಸಿದರು.

Tags:

error: Content is protected !!