Hukkeri

ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್’ಗೆ ಬಿಟ್ಟದ್ದು

Share

ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್’ಗೆ ಬಿಟ್ಟದ್ದು. ನಮ್ಮ ಸರ್ಕಾರದ ಅವಧಿಯಲ್ಲೇ ಜಿಲ್ಲಾ ವಿಭಜನೆ ಮಾಡುವ ಆಸೆಯಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಇಂದು ಹುಕ್ಕೇರಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಮತ್ತು ಯಾವಾಗ ಕೊಡುತ್ತಾರೆ ಎಂಬುದು ಹೈಕಮಾಂಡ್’ಗೆ ಬಿಟ್ಟ ವಿಚಾರ. ನಾವು ಆಕಾಂಕ್ಷಿಗಳಾದರು ಜವಾಬ್ದಾರಿ ನೀಡುವುದು ಬಿಡುವುದು ಹೈಕಮಾಂಡಗೆ ಬಿಟ್ಟದ್ದು. ಯಾವು ಯಾರ ಮೇಲೂ ಈ ಕುರಿತು ಒತ್ತಡ ಹಾಕಿಲ್ಲ ಎಂದರು.

ಬೆಳಗಾವಿ ಜಿಲ್ಲಾ ವಿಭಾಜನೆ ಆಗಬಹುದು. ಆದರೇ ತಕ್ಷಣ ಆಗಲ್ಲ. ಇದೇ ಸರ್ಕಾರದಲ್ಲಿ ಮಾಡುವ ಆಸೆಯಿದೆ ಎಂದರು. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ-ಡಿಸಿಎಂ ನಡುವೆ ಯಾವುದೇ ಅಸಮಾಧಾನವಿಲ್ಲ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರಿ ಸರ್ಕಾರಕ್ಕಿದೆ. ಆದರೇ ಇದನ್ನು ಯಾರು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

ಇನ್ನು ಮಳೆಯಿಂದಾಗಿ ಬೆಳೆ ಹಾನಿಯಾದ ಬಗ್ಗೆ ಸರ್ವೆ ನಡೆಸಲಾಗುತ್ತಿದ್ದು, ಪರಿಹಾರವನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು. ನದಿತೀರ ಸೇರಿದಂತೆ ಇನ್ನುಳಿದ ಕಡೆಗಳಲ್ಲಿಯೂ ಮಳೆಯಿಂದ ಹಾನಿಯಾಗಿದೆ. ಸರ್ವೆ ನಡೆಸಲಾಗುವುದು ಎಂದರು.

ಇನ್ನು ಮಹಾರಾಷ್ಟ್ರದಿಂದ ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿದಿನವು ನಿರಂತರವಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ನೀರು ಹರಿಸುವ ಮುನ್ನ ಮುನ್ಸೂಚನೆ ನೀಡಲಾಗುತ್ತದೆ ಎಂದರು.

Tags:

error: Content is protected !!