ಬೆಳಗಾವಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಷ್ಮೀತಾಯಿ ಫೌಂಡೇಶನ್’ನ ವತಿಯಿಂದ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಭಿವೃದ್ಧಿಯೇ ಮೂಲಮಂತ್ರವೆಂದು ರಾಜಕಾರಣವನ್ನು ನಡೆಸಲಾಗುತ್ತಿದೆ. ಮೊದಲ ಆದ್ಯತೆಯನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡಲಾಗಿದೆ. ಮಕ್ಕಳ ತಂದೆ-ತಾಯಿಯ ಆಸ್ತಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ ಪಡೆದು ಮಕ್ಕಳು ಉನ್ನತ ಹುದ್ಧೆಗೇರಬೇಕೆನ್ನುವುದು ಎಲ್ಲ ಪಾಲಕರ ಆಸೆಯಾಗಿದೆ. ತಮ್ಮ ಪಾಲಕರ ಕಷ್ಟವನ್ನು ಅರಿತು ಯೋಗ್ಯ ಮಾರ್ಗವನ್ನು ತೋರಿಸಿದ ತಂದೆ-ತಾಯಿಯನ್ನು ತಮ್ಮ ಆಸ್ತಿ ಎಂದು ಹೇಳಬೇಕು. ಶಿಕ್ಷಣದ ಜೊತೆಗೆ ಸಾಮಾಜೀಕ ಬದ್ಧತೆಯನ್ನು ಪಡೆಯುವುದು ಅತ್ಯಂತ ಅವಶ್ಯಕ. ಎಲ್ಲ ರಾಜಕಾರಣಿಗಳು ಕೆಟ್ಟಿರಲ್ಲ. ಅವರಿಗೂ ಮನಸ್ಸು-ಹೃದಯವಿರುತ್ತದೆ. ಸದಾ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯನ್ನು ಮಾಡುತ್ತಿರುತ್ತಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಅತ್ಯಂತ ಹಿಂದುಳಿದ್ದಿದ್ದು, ಎಲ್ಲರ ಆರ್ಶೀವಾದದಿಂದ ಪ್ರಗತಿಪಥದತ್ತ ಸಾಗುತ್ತಿದೆ. ಪ್ರತಿಯೊಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗುವುದು. ವಿದ್ಯೆಯೇ ವಿನಯೇಯ ಭೂಷತೆ ಎಂದು ಹೇಳುತ್ತ ಸಾಧನೆಯ ಗುರಿಯನ್ನು ಇಟ್ಟುಕೊಂಡು ಓದಬೇಕು. ಶಿಸ್ತಿನಿಂದ ಜೀವನದಲ್ಲಿ ಮುಂದೆ ಸಾಗಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ಜನರು ಇನ್ಮುಂದೆ ಉನ್ನತ ಹುದ್ಧೆಗೆ ಏರಬೇಕು. ಇದಕ್ಕೆ ಸಹಕಾರ ನೀಡಲು ಸದಾಬದ್ಧ ಎಂದರು. ಬೈಟ್
ನಂತರ ದ್ವಿತೀಯ ಪಿಯುಸಿಯಲ್ಲಿ ಶೇ. 99 ರಷ್ಟು ಅಂಕ ಪಡೆದ ಮೋದಗಾ ಗ್ರಾಮದ ಸೃಷ್ಠಿ ನಾರಾಯಣ ಆಪ್ಟೆ ಎಂಬ ವಿದ್ಯಾರ್ಥಿನಿಗೆ ಎಂ.ಬಿ.ಬಿ.ಎಸ್ ಕಲಿತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಉಜ್ವಲಗೊಳಿಸಲು ಎಲ್ಲ ಸಹಾಯ ನೀಡುವುದಾಗಿ ಘೋಷಿಸಿದರು. ಅಲ್ಲದೇ ಶೇ.90 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಪ್ರವೇಶಕ್ಕೆ ಅನುಕೂಲವಾಗಲೆಂದು ನಗದು ಬಹುಮಾನವನ್ನು ಈ ಬಾರಿಯಿಂದ ವಿತರಿಸುವುದಾಗಿ ಹೇಳಿದರು. (ಫ್ಲೋ)
ಇದಕ್ಕೂ ಮುನ್ನು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಈಗೀನ ಕಾಲದಲ್ಲಿ ವಿದ್ಯೆ ಅತ್ಯಂತ ಪ್ರಮುಖವಾಗಿದೆ. ದೇಶದ ಪ್ರಗತಿಯೊಂದಿಗೆ ಕೈ ಜೋಡಿಸಲು ವಿದ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದುಳಿದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2018 ರಿಂದ ಶಿಕ್ಷಣ ಮತ್ತು ಆರೋಗ್ಯಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒತ್ತು ನೀಡುತ್ತಿದ್ದಾರೆ. ಮುಂದಿನ ವರ್ಷದೊಳಗಾಗಿ ಇಂದಿರಾಗಾಂಧಿ ವಸತಿ ಶಾಲೆಯನ್ನು 22 ಕೋಟಿ ರೂಪಾಯಿ ವೆಚ್ಚದಲ್ಲಿ ತುರಮುರಿಯಲ್ಲಿ ನಿರ್ಮಿಸಲಾಗುವುದು. ಹಿರೇಬಾಗೇವಾಡಿಯಲ್ಲಿಯೂ 30 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅದರಂತೆ ಬೆಳಗುಂದಿಯಲ್ಲಿ 20 ಕೋಟಿಯಲ್ಲಿ ತಾಲೂಕಾಮಟ್ಟದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಎಂದರು. ಬೈಟ್
ಡಿಡಿಪಿಐ ಲೀಲಾವತಿ ಹಿರೇಮಠ ಅವರು, ದೂರದೃಷ್ಠಿಯೊಂದಿಗೆ ಮತ್ತು ಅರ್ಥಪೂರ್ಣ ಉದ್ಧೇಶವನ್ನು ಹೊಂದಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಾರಿ ಗುಣಮಟ್ಟದ ಶಿಕ್ಷಣವನ್ನು ನೀಡಿ ಒಳ್ಳೆಯ ಫಲಿತಾಂಶವನ್ನು ಜಿಲ್ಲೆಯೂ ಪಡೆದಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಶಿಕ್ಷಣ ನೀಡಬೇಕೆಂದು ಸಚಿವರು ಹೇಳಿದ ಕಿವಿ ಮಾತನ್ನು ಅನುಸರಿಸಿಕೊಂಡು ಗ್ರಾಮೀಣ ಭಾಗದಲ್ಲಿ ಮುಂದಿನ ಬಾರಿ ಇನ್ನಷ್ಟು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲಾಗುವುದು. ಈಗಾಗಲೇ 10 ಕೋಟಿಗೂ ಅಧಿಕ ವೆಚ್ಚದಲ್ಲಿ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಆರಂಭಿಸಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಳಗಾವಿ ಗ್ರಾಮೀಣಭಾಗದ ಜನರು ಅದೃಷ್ಟವಂತರು ಎಂದರು. ಬೈಟ್
ಮೊದಲಿಗೆ ಬೆಳಗಾವಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು. ಅಲ್ಲದೇ ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೂಡ ಸಚಿವರಿಗೆ ಧನ್ಯವಾದ ಪ್ರಮಾಣಪತ್ರ ನೀಡಿ ಸನ್ಮಾನಿಸಿದ್ದು ವಿಶೇವಾಗಿತ್ತು. (ಫ್ಲೋ) ನಂತರ ವಿದ್ಯಾರ್ಥಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ವಿಶೇವಾಗಿತ್ತು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಕಾಂಬಳೆ, ಯುವರಾಜ್ ಕದಮ್, ಸುರೇಶ್ ಇಟಗಿ, ನಾಗೇಶ್ ದೇಸಾಯಿ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಸಿಪಿಐ ಅವಟಿ, ಮನೋಹರ ಬೆಳಗಾಂವಕರ, ಗೌಸ್ ಜಾಲಿಕೊಪ್ಪ, ಮಹೇಶ್ ಕೋಲಕಾರ, ಮನ್ಸೂರ್ ಅಲಿ ಅತ್ತಾರ, ಗಾಯತ್ರಿ ಪಾಟೀಲ್, ಎಂ.ವೈ ಪಾಟೀಲ್ ಇನ್ನುಳಿದವರು ಉಪಸ್ಥಿತರಿದ್ಧರು.