Bagalkot

ಕೈ ನಾಯಕರ ಆಂತರಿಕ ವೈಮನಸ್ಸುಗಳ ಮಧ್ಯೆ ಬಾಗಲಕೋಟೆಯಲ್ಲಿ ಬೀದಿಗೆ ಬಂತು ಕೈ ಮುಖಂಡರ ಆಂತರಿಕ ಕಲಹ!!!

Share

ಬಾಗಲಕೋಟೆ: ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಅಂತರಕಲಹ ಇದೀಗ ಬೀದಿಗೆ ಬಂದಿದೆ.

ಕೆಪಿಸಿಸಿ ಸಂಯೋಜಕ ಪ್ರವೀಣಗೌಡ ಪಾಟೀಲ ಹಾಗೂ ಬೀಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಕಿಯವರ ನಡುವೆ ನಡೆದ ಬೈದಾಟದ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಆಡಿಯೋದಲ್ಲಿ ಇಬ್ಬರೂ ಮುಖಂಡರು ಪರಸ್ಪರ ಅವ್ಯಾಚ್ಯ ಪದಗಳಲ್ಲಿ ವಾಗ್ದಾಳಿ ನಡೆಸಿದ್ದು, ಪಕ್ಷದ ಆಂತರಿಕ ವಿಷಯಗಳು ಹಾಗೂ ಮತಕ್ಷೇತ್ರದ ರಾಜಕೀಯ ಸ್ಥಿತಿಗತಿಯ ಕುರಿತಾಗಿ ತೀವ್ರ ವಾಗ್ವಾದ ನಡೆದಿದೆ. ವಿಷಯ ತೀವ್ರ ರೂಪ ಪಡೆದು, ಪ್ರವೀಣಗೌಡ ಪಾಟೀಲ ಇಂದು ಬಾಗಲಕೋಟೆ ಎಸ್.ಪಿ. ಕಚೇರಿ ತಲುಪಿ, “ನನಗೆ ಜೀವ ಬೆದರಿಕೆ ಇದೆ” ಎಂದು ಪೊಲೀಸ್ ದೂರು ನೀಡಿದ್ದಾರೆ.ಕೇವಲ ಸ್ಥಳೀಯ ಮಟ್ಟದಲ್ಲಿ ಅಲ್ಲದೆ, ಈ ಘಟನೆ ಈಗ ರಾಜ್ಯದ ಮಟ್ಟಕ್ಕೂ ತಲುಪಿದ್ದು, ಪ್ರವೀಣಗೌಡ ಪಾಟೀಲ ಇದೀಗ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗಮನಕ್ಕೂ ವಿಷಯವನ್ನು ತರಲು ಸಜ್ಜಾಗಿದ್ದಾರೆ.

Tags:

error: Content is protected !!