ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ರಾಜು ಕಾಗೆ ನಾಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿಯಾಗಲಿದ್ದು, ಅವರು ಕೇಳುವ ಪ್ರಶ್ನೆಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಅವರು ಮಾಧ್ಯಮಗಾರರೊಂದಿಗೆ ಮಾತನಾಡಿದರು. ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಭೇಟಿಗೆ ಕರೆದ ವಿಷಯ ಕಳೆದ ರಾತ್ರಿ ತಡವಾಗಿ ತಿಳಿದಿದೆ. ಇಂದು ವಾ.ಕ.ರ. ಸಾ ಕುಂದು ಕೊರತೆ ಸಭೆಯಿರುವ ಕಾರಣ ಇಂದೇ ಹೋಗಿ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಾಳೆ ಮಂಗಳವಾರ ಭೇಟಿಯಾಗುತ್ತೇನೆ ತಿಳಿಸಿದ್ಧೇನೆ ಎಂದರು. ಅವರು ಏನು ಕೇಳುತ್ತಾರೋ ಅದಕ್ಕೆ ಉತ್ತರಿಸುತ್ತೇನೆ ಎಂದರು. ಇದೇ ವೇಳೆ ಯಾವ ವಿಚಾರಕ್ಕೆ ತಮಗೆ ಬುಲಾವಾ ಬಂದಿದೆ ಎಂದು ಕೇಳಿದ್ದಕ್ಕೆ ಮೊನ್ನೆಯೇ ಎಲ್ಲವನ್ನು ಹೇಳಿಲ್ಲವೇ ಎಂದು ಶಾಸಕರು ಜಾರಿಕೊಂಡರು.