ದಸರಾ ಪೂರ್ವ ತಯಾರಿಯ ಮುನ್ನವೇ ಸಿಎಂ ಸಿದ್ಧರಾಮಯ್ಯ ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆಂದು ಮಾಜಿ ಸಚಿವ ಮತ್ತು ಹಾಲಿ ಬಿಜೆಪಿ ಶಾಸಕ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕೈ ಶಾಸಕ ಬಿ.ಆರ್. ಪಾಟೀಲ್, ರಾಜು ಕಾಗೆ ಸೇರಿದಂತೆ ಹಲವು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಮೇಲೆ ಗೆದ್ದು ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ಈಗ ನವೆಂಬರ್ ಅಥವಾ ದಸರಾದಲ್ಲಿ ನೇತೃತ್ವ ಬದಲಾವಣೆ ನಡೆಯುವ ಹೇಳಿಕೆಗಳು ಕೇಳಿ ಬರುತ್ತಿವೆ. ದಸರಾ ಉತ್ಸವದ ಪೂರ್ವ ತಯಾರಿಯ ಮೊದಲೇ ಸಿಎಂ ಸಿದ್ಧರಾಮಯ್ಯ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ ಎಂದರು. ಬೈಟ್
ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷದ ಹೈಕಮಾಂಡ್ ತಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷರನ್ನು ನಮ್ಮ ಪಕ್ಷದಲ್ಲಿ ಬದಲಾಯಿಸಲಾಗುತ್ತದೆಯೇ ಹೊರತು ಇಲ್ಲಿಯ ವರೆಗೂ ಯಾವುದೇ ಅಧ್ಯಕ್ಷರ ಅಧಿಕಾರವನ್ನು ಮಧ್ಯದಲ್ಲೇ ಮೊಟಕುಗೊಳಿಸಿಲ್ಲ ಎಂದರು. ಬೈಟ್
ವಿಪಕ್ಷ ನಾಯಕರನ್ನು ಬದಲಾಯಿಸುತ್ತಾರೆಂಬುದು ನಮಗೆ ಗೊತ್ತಿಲ್ಲ. ಆದರೇ. ಆರ್. ಅಶೋಕ ವಿಧಾನಸಭೆಯ ಒಳಗೂ ಹೊರಗೂ ಸರ್ಕಾರದ ವಿರುದ್ಧ ಸರ್ಕಾರಕ್ಕೆ ಚಾಟಿ ಬೀಸುತ್ತ ಸಕ್ರಿಯವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ತಮ್ಮದೇ ಶಾಸಕರಾಗಲಿ, ತಮ್ಮದೇ ಸರ್ಕಾರದ ಅಧಿಕಾರಿಗಳೇ ಆಗಲಿ ಅವರಿಗೆ ಗೌರವ ಕೊಡುತ್ತಿಲ್ಲ. ಇನ್ನು ವಿಪಕ್ಷ ನಾಯಕರಿಗೆ ಯಾವ ಗೌರವ ಕೊಡುತ್ತಾರೆ? ಎಂದು ಪ್ರಶ್ನಿಸಿದ ಅವರು ಬಿಹಾರ್ ಚುನಾವಣೆಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಎಟಿಎಂ ನಂತೆ ವಸೂಲಿಗೆ ನಿಂತಿದೆ ಎಂದು ಆರೋಪಿಸಿದರು. ಬೈಟ್