Banglore

ಮೃತಪಟ್ಟವರನ್ನು ಕಂಡು ಡಿಸಿಎಂ ಕಣ್ಣೀರಿಟ್ಟ ಪ್ರಸಂಗವನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು…

Share

ಬೆಂಗಳೂರು ಕಾಲ್ತುಳಿತ ಪ್ರಕರಣದ ಪಾರದರ್ಶಕ ನ್ಯಾಯಾಂಗ ತನಿಖೆಯನ್ನು ಸರ್ಕಾರ ನಡೆಸುತ್ತಿದೆ. ಡಿಸಿಎಂ ಮೃತಪಟ್ಟವರನ್ನು ಕಂಡು ಕಣ್ಣೀರಿಟ್ಟ ಪ್ರಸಂಗವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳದರು.

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಲ್ತುಳಿತ ಸಂಭವಿಸುತ್ತಿದ್ದಂತೆ ಸರ್ಕಾರ ತಕ್ಷಣ ನಿರ್ಣಯವನ್ನು ತೆಗೆದುಕೊಂಡಿದೆ. ಸರ್ಕಾರ ಕೇವಲ ಪೊಲೀಸ್ ಅಧಿಕಾರಿಗಳನ್ನೇ ಹೊಣೆಯಾಗಿಸಿದೆ ಎಂದು ನಿಮಗೆ ಯಾರೂ ಹೇಳಿದವರು? ಆರ್.ಸಿ.ಬಿ ಮುಖ್ಯಸ್ಥರನ್ನು ಬಂಧಿಸಿ ಕ್ರಮಕ್ಕೆ ಆದೇಶಿಸಿದ್ದೇವೆ. ಕ್ರಿಕೆಟ್ ಅಸೋಸಿಯೇಷನ್, ಇವೆಂಟ್ ಮ್ಯಾನೇಜರ್, ಲೋಪವಾದವರನ್ನು ಬಂಧಿಸಿ, ಕ್ರಮಕೈಗೊಳ್ಳಲು ಆದೇಶಿಸಿದ್ದೇವೆ. ಏಕ ಆಯೋಗದ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ವಿಚಾರಣೆಗೆ ಆದೇಶಿಸಿದ್ದೇವೆ. ಇದು ನಿಮಗೆ ಪಾರದರ್ಶಕ ಎನಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇನ್ನು ಇಂಟಲಿಜೆನ್ಸಿ ವೈಫಲ್ಯವೆಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಹೇಳಿಕೆ ಸಂಬಂಧಿಸಿದಂತೆ ಅವರು ಅನುಭವಸ್ಥರು. ಅದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಸಿಎಂ-ಡಿಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿಎಂ-ಡಿಸಿಎಂ ಘಟನೆ ನಡೆದ ಮರುಕ್ಷಣವೇ ಯಾವುದನ್ನು ಲೆಕ್ಕಿಸದೇ, ಮೃತರ ಬಳಿ ಧಾವಿಸಿದ್ದು, ತಪ್ಪಾ? ಮೃತಪಟ್ಟಾಗ ಅತ್ತರೂ ವ್ಯಾಖ್ಯಾನ ಮಾಡುತ್ತಾರೆ. ಇದು ನಾಚಿಕೆಗೇಡು. ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳದೇ, ನೋವಿಗೆ ವ್ಯಥೆ ಪಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದರು.

Tags:

error: Content is protected !!