ಸತ್ಯಶೋದಕ ಡಾ. ಅಣ್ಣಾ ಭಾವು ಸಾಟೆಯವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿ ಶನಿವಾರದಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ದಲಿತ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಸತ್ಯಶೋಧಕ ಅಣ್ಣಾಬಾವು ಸಾಟೆ ಅವರ ಜಯಂತೋತ್ಸವವನ್ನು ಸರ್ಕಾರ ಆಚರಣೆ ಮಾಡಬೇಕು ಮತ್ತು ಅವರಿಗೆ ಭಾರತರತ್ನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಶಂಕರ ಸತ್ಯಶೋಧಕ ಡಾಕ್ಟರ್ ಅಣ್ಣಾ ಬಾವು ಸಾಟೆ ಅವರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ನವ ಸಮಾಜದ ಕನಸು ಕಂಡವರು. ಅಂತವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ದಲಿತಪರ ಸಂಘಟನೆಗಳು ಮಾಧ್ಯಮ ಮೂಲಕ ಸರ್ಕಾರಕ್ಕೆ ಅಗ್ರಹಿಸಿದರು. ಅನುಭವಿಸ ದೇವರು ಸಮಾಜದಲ್ಲಿನ ಆಸ್ಪೃಶ್ಯತೆಯನ್ನು ಹೊರ ಹಾಕಿದವರು. ಬಡವರ ಶಿಕ್ಷಣಕ್ಕಾಗಿ ಸಾಕಟ್ಟು ಹೋರಾಟ ಮಾಡಿದ್ದಾರೆ ಅಂತವರಿಗೆ ಭಾರತರತ್ನ ನೀಡಿದರೆ ದಲಿತ ಸಮಾಜಕ್ಕೆ ಕೊಡಗೆ ನೀಡಿದಂತಾಗುತ್ತದೆ ಎಂದು ಹೇಳಿದರು