Belagavi

ಸಂಘಟನೆಯು ಜನರ ಹಿತಾಸಕ್ತಿ ಕಾಪಾಡುವ ಜನರ ದ್ವನಿಯಾಗಬೇಕು – ಮಹೇಶ  ಶಿಗಿಹಳ್ಳಿ 

Share

ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಕುಂದು ಕೊರತೆಗಳ ಮುಖ್ಯ ಸಭೆ ಯಶಸ್ವಿಯಾಗಿ ನೆರವೇರಿತು.

ನೂತನವಾಗಿ ಸಂಘಟನೆ ಪದಾಧಿಕಾರಿಗಳಾಗಿ ಆಯ್ಕೆಯಾದ (ರಾಜ್ಯ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ಹೆಗ್ಗನಾಯಕ ) (ರಾಜ್ಯ ಪ್ರಚಾರ ಕಾರ್ಯದರ್ಶಿಯಾಗಿ ಅರುಣ ನೇಸರಗಿ) ಹಾಗೂ (ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ಮಂಗೇಶ್ ಚನ್ನಿಕುಪ್ಪಿ) ಮತ್ತು (ಬೆಳಗಾವಿ ತಾಲೂಕು ಉಪದ್ಯಕ್ಷರಾಗಿ ಮುತ್ತುರಾಜ್ ಹೊಸಗಟ್ಟಿ) (ರಾಮದುರ್ಗ ತಾಲೂಕು ಅಧ್ಯಕ್ಷರಾಗಿ ಮಂಜುನಾಥ್ ಹನಸಿ) (ಯರಗಟ್ಟಿ ತಾಲೂಕು ಪ್ರಧಾನ ಸಂಚಾಲಕರಾಗಿ ರುದ್ರಪ್ಪ ತುರ್ಮಂದೀ ) (ಬೆಳಗಾವಿ ಗ್ರಾಮೀಣ ಸಹ ಕಾರ್ಯದರ್ಶಿಯಾಗಿ ರಾಜು ಮ್ಯಾಕಲಿ) ಪದಾಧಿಕಾರಿಗಳು ಆಯ್ಕೆಯಾದರು ಸಂಘಟನೆಯು ಜನರ ಒಳಿತಕ್ಕಾಗಿ ಹಾಗೂ ಒಳ್ಳೆಯ ಅಭಿವೃದ್ದಿಗಾಗಿ ಹೋರಾಟ ಮಾಡಲು ಸಿದ್ಧರಿರಬೇಕು ಹಾಗೂ ಮತ್ತಷ್ಟು ಹಲವು ವಿಷಯಗಳನ್ನು ರಾಜ್ಯಾದ್ಶಕ್ಷರಾದ ಮಹೇಶ್ ಎಸ್ ಶೀಗಿಹಳ್ಳಿ ಪದಾದಿಕಾರಿಗಳಿಗೆ ತಿಳಿಸಿದರು .

ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್. ಹೆಗ್ಗನಾಯಕ ರವರು ಸರ್ಕಾರದ ಸೌಲಭ್ಯವನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಮತ್ತು ರಾಜ್ಯ ಪ್ರಚಾರ ಕಾರ್ಯದರ್ಶಿಗಳಾದ ಅರುಣ ನೇಸರಗಿ ರವರು ಶಿಕ್ಷಣ ಸಂಘಟನೆ ಹೋರಾಟ ದ ಬಗ್ಗೆ ತಿಳಿಸಿದರು .

ಈ ಸಂದರ್ಬದಲ್ಲಿ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

Tags:

error: Content is protected !!